ಇಲ್ಲಿ ಮುಖ್ಯವಾಗಿ ಹೇಳ ಹೊರಟ ವಿಷಯವೇನೆಂದರೆ ಭಾರತದ ಸರಕಾರದಿಂದ ಬೇಕಾದ ಎಲ್ಲಾ ಸವಲತ್ತುಗಳನ್ನ ಪಡೆದು ಆದರೆ ಆ ಸವಲತ್ತು ಪಡೆದ ಇತರ ರಾಜ್ಯಗಳು ತೋರಿಸುವ ಬಾಧ್ಯತೆ, ಬದ್ಧತೆಗಳಿಂದ ಮಾತ್ರ ಜಮ್ಮ-ಕಾಶ್ಮೀರ ವಿಮುಖವಾಗಿತ್ತು. ಇಲ್ಲಿನ ದೇಣಿಗೆ ಬೇಕು ಆದರೆ ಇಲ್ಲಿನ ಯಾವ ರೀತಿ ನೀತಿ, ಕಾನೂನು ಬೇಡ.ಇಂತಹ ಒಂದು ಒಪ್ಪಂದವನ್ನ ಸರಿಯೆಂದು ಒಪ್ಪಿಗೆ ಕೊಟ್ಟದ್ದು 1949ರಲ್ಲಿ ಅಂದಿನ ಕೇಂದ್ರ ಸರಕಾರ. ಇಂತಹ ವಿಶೇಷ ಸವಲತ್ತು ಕೇವಲ ಒಂದಷ್ಟು ವರ್ಷಗಳಿಗೆ ಮಾತ್ರ ಎನ್ನುವ ಲೆಕ್ಕಾಚಾರದಲ್ಲಿ ನೀಡಿದ್ದು ನಂತರದ ದಿನಗಳಲ್ಲಿ ಅದನ್ನ ಎಲ್ಲರೂ ಮರೆತವರಂತೆ ವರ್ತಿಸಿದರು. ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ಭಾರತವನ್ನ ದ್ವೇಷಿಸುವ ಅಧಿಕಾರದಲ್ಲಿ ಇರುವ ರಾಜಕಾರಿಣಿಗಳಿಗೆ ದೇಣಿಗೆ ರೂಪದಲ್ಲಿ ನೀಡುತ್ತಾ ಬರಲಾಯಿತು. ಇದು ಅವ್ಯಾಹತವಾಗಿ 7 ದಶಕಗಳ ಕಾಲ ನೆಡೆಯಿತು ಎಂದರೆ ನಮ್ಮ ಕೇಂದ್ರ ಸರಕಾರವನ್ನ ವಹಿಸಿಕೊಂಡ ಜನರ ವ್ಯಾವಹಾರಿಕ ಜ್ಞಾನದ ಬಗ್ಗೆ ಸಂಶಯ ಹುಟ್ಟಿಸುವಷ್ಟು. ಇರಲಿ.