ಬಾಲಕೋಟ್ ಮೇಲೆ ನಮ್ಮ ವಾಯುಪಡೆ ದಾಳಿ ನೆಡೆಸಿ ಅಲ್ಲಿನ ಉಗ್ರರ ನೆಲೆಯನ್ನ ನಾಶ ಪಡಿಸಿದ್ದು ಭಾರತೀಯ ನಾಗರಿಕರಿಗೆ ಸರಕಾರದ ಮೇಲೆ ಇನ್ನಿಲ್ಲದ ವಿಶ್ವಾಸ ನೀಡಿದೆ. ಆದರೆ ಮೋದಿ ಸರಕಾರಕ್ಕೆ ಗೊತ್ತು ಇಂತಹ ದಾಳಿಗಳ ಫಲಿತಾಂಶ ಹೆಚ್ಚು ಹೊತ್ತು ನಮಗೆ ಖುಷಿ ನೀಡುವುದಿಲ್ಲವೆಂದು ಹಾಗಾಗಿ ಪಾಕಿಸ್ತಾನದ ಜೊತೆಗಿನ ವ್ಯಾಪಾರ ವಹಿವಾಟಿಗೆ ಕಡಿವಾಣ ಹಾಕಿದರೆ ಸಾಕು ಮೊದಲೇ ಆರ್ಥಿಕವಾಗಿ ಜರ್ಜರಿತವಾಗಿರುವ ಪಾಕಿಸ್ತಾನ ಮತ್ತಷ್ಟು ಕುಸಿಯುತ್ತದೆ. ಈ ನಿಟ್ಟಿನಲ್ಲಿ 1996 ರಲ್ಲಿ ಮೋಸ್ಟ ಫೆವರ್ಡ್ ನೇಶನ್ ಎನ್ನುವ ಪಟ್ಟವನ್ನ ಭಾರತ ಪಾಕಿಸ್ತಾನಕ್ಕೆ ನೀಡಿತ್ತು ಅದನ್ನ ಪುಲ್ವಾಮಾ ಘಟನೆ ನಂತರ ವಾಪಸ್ಸು ಪಡೆಯಲಾಗಿದೆ. ಪಾಕಿಸ್ತಾನದಿಂದ ಭಾರತಕ್ಕೆ ಆಮದಾಗುವ ಹಣ್ಣು, ಸಿಮೆಂಟ್, ಪೆಟ್ರೋಲಿಯಂ ಪದಾರ್ಥಗಳು, ಮಿನರಲ್ಸ್, ಲೆದರ್, ಹತ್ತಿ, ಮಸಾಲಾ ಪದಾರ್ಥಗಳು, ರಬ್ಬರ್ ಪದಾರ್ಥಗಳು ಹೀಗೆ ಹಲವಾರು ಉತ್ಪನ್ನಗಳ ಮೇಲೆ ಸುಂಕವನ್ನ 200 ಪ್ರತಿಶತ ಹೆಚ್ಚಿಸಲಾಗಿದೆ. ಅಂದರೆ ಗಮನಿಸಿ ನೋಡಿ ಈ ಪದಾರ್ಥಗಳನ್ನ ನಾವು ನಿಮ್ಮಿಂದ ಕೊಳ್ಳುವುದಿಲ್ಲ ಎನ್ನಲಿಲ್ಲ ಆದರೆ ಆ ಪದಾರ್ಥಗಳ ಮೇಲೆ ಹಾಕುತ್ತಿದ್ದ ಸುಂಕವನ್ನ 2೦೦ ಪ್ರತಿಶತ ಹೆಚ್ಚಿಸಿದರೆ ಅದರರ್ಥ ಪಾಕಿಸ್ತಾನದ ರಫ್ತು ನಿಂತ ಹಾಗೆಯೇ! ಉದಾಹರಣೆ ನೋಡೋಣ. ಹತ್ತಿಯ ಬೆಲೆ ಕೇಜಿಗೆ 10 ರೂಪಾಯಿ ಇತ್ತು ಎಂದುಕೊಳ್ಳಿ ಪುಲ್ವಾಮಗೆ ಮುಂಚೆ ಇದನ್ನ ಭಾರತಕ್ಕೆ ರಫ್ತು ಮಾಡಲು ಪಾಕಿಸ್ತಾನ 3.5 ರೂಪಾಯಿ ಸುಂಕ ನೀಡಬೇಕಿತ್ತು ಅಂದರೆ 35 ಪ್ರತಿಶತ ಸುಂಕವಿತ್ತು. ಹೀಗೆ ಸುಂಕದ ಮೊತ್ತ 7.5 ಇಂದ 50 ಪ್ರತಿಶತದವರೆಗೆ ವಸ್ತುವಿನ ಮೇಲೆ ಬದಲಾಗುತ್ತಿತ್ತು. ಇದೀಗ ಇದು 2೦೦ ಪ್ರತಿಶತವಾಗಿದೆ. ಅಂದರೆ 10 ರೂಪಾಯಿ ಹತ್ತಿಯ ಮೇಲಿನ ಸುಂಕ 20 ರೂಪಾಯಿ!! ಇದರಿಂದ ಪಾಕಿಸ್ತಾನಕ್ಕೆ ಆಗಬಹದುದಾದ ಅಂದಾಜು ನಷ್ಟ 3480 ಕೋಟಿ ರೂಪಾಯಿ. ಪುಲ್ವಾಮಾ ದಾಳಿಯ ನಂತರ ಸರಹದ್ದಿನಲ್ಲಿ ಹಣ್ಣು ಹೊತ್ತು ಬಂದಿದ್ದ ಸಾವಿರಾರು ಲಾರಿಗಳನ್ನ ವಾಪಸ್ಸು ಕಳಿಸಲಾಗಿದೆ. ಪಾಕಿಸ್ತಾನಕ್ಕೆ ಪರೋಕ್ಷವಾಗಿ ಭಾರಿ ಹೊಡೆತವನ್ನ ನೀಡಲಾಗಿದೆ. ಬಾಲಕೋಟ್ ನಲ್ಲಿ ನೀಡಿದ ಹೊಡೆತವನ್ನ ಪಾಕಿಸ್ತಾನ ಬಹುಬೇಗ ಮರೆಯುತ್ತದೆ. ಆರ್ಥಿಕವಾಗಿ ನೀಡಿರುವ ಹೊಡೆತ ಸಾಮಾನ್ಯ ಭಾರತೀಯ ಪ್ರಜೆಯ ಕಣ್ಣಿಗೆ ಕಾಣದೆ ಹೋಗಬಹದು ಆದರೆ ಅದರ ಪರಿಣಾಮ ಮಾತ್ರ ಬಹು ದೊಡ್ಡದು. ಪಾಕಿಸ್ತಾನಕ್ಕೆ ಚನ್ನಾಗಿ ಗೊತ್ತಿದೆ ಅದು ಯುದ್ಧ ಮಾಡುವ ಸ್ಥಿತಿಯಿರಲಿ ಸುಮ್ಮನಿದ್ದರೂ ಕೂಡ ತಿಂಗಳೊಪ್ಪತ್ತಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಹಾಯ ಸಿಗದೇ ಹೋದರೆ ಬಿಕಾರಿ ದೇಶವಾಗಿ ಹೋಗಲಿದ್ದೇನೆ ಎನ್ನವುದು ಅಂದ ಮೇಲೆ ಯುದ್ಧದ ಮಾತೆಲ್ಲಿ? ಅಮನ್.. ಅಮನ್ ಅಥವಾ ಶಾಂತಿ ಶಾಂತಿ ಎನ್ನವುದರ ನಿಜವಾದ ಕಾರಣ 'ಹಣ'.