2014ರಲ್ಲಿ ಸಿಕ್ಕ ಬಹುಮತವನ್ನ ಸರಿಯಾಗಿ ಬಳಕೆ ಮಾಡಿಕೊಂಡು, ಕೇಂದ್ರ ಸರಕಾರ ರಚಿಸಿ ಉತ್ತಮ ಆಡಳಿತ ನೀಡಿದ್ದು ವರವಾಗಿ ಪರಿಣಮಿಸಿ ಪ್ರಧಾನಿ ನರೇಂದ್ರ ಮೋದಿಗೆ 2019 ರಲ್ಲಿ ಕೂಡ ಅದ್ವಿತೀಯ ಜಯವನ್ನ ನೀಡಿದೆ. ಒಬ್ಬ ವ್ಯಕ್ತಿ ಹೇಗೆ ವ್ಯವಸ್ಥೆಯನ್ನ ಬದಲಾಯಿಸಬಲ್ಲ ಎನ್ನುವುದಕ್ಕೆ ಭಾರತದ ಪ್ರಧಾನ ಮಂತ್ರಿ ಉದಾಹರಣೆಯಾಗಿ ನಿಲ್ಲುತ್ತಾರೆ. ಚುನಾವಣೆ ಫಲಿತಾಂಶ ಪೂರ್ಣವಾಗಿ ಘೋಷಣೆಯಾಗುವ ಮುನ್ನವೇ ಮುಂದಿನ ನೂರು ದಿನಗಳಲ್ಲಿ ಏನು ಮಾಡಬೇಕು ಎನ್ನುವ ನೀಲನಕ್ಷೆ ತಯಾರಿಸಲು ತಮ್ಮ ಟೀಮ್ ಗೆ ಆದೇಶ ನೀಡುತ್ತಾರೆ ಎಂದರೆ., ಕೆಲಸ ಮಾಡಿ ಮುಗಿಸಬೇಕೆನ್ನುವ ತುಡಿತ ಎಷ್ಟಿರಬಹದು ಎನ್ನುವುದರ ಅರಿವು ನಿಮ್ಮದಾಗಬಹದು. ಇರಲಿ. ಇಂದಿನ ಲೇಖನದ ಉದ್ದೇಶ ಮುಂದಿನ ನೂರು ದಿನಗಳಲ್ಲಿ ಯಾವ ಕಾರ್ಯಕ್ಷೇತ್ರದಲ್ಲಿ ಅತ್ಯಂತ ತ್ವರಿತಗತಿಯಲ್ಲಿ ಕೆಲಸವಾಗುತ್ತದೆ ಎನ್ನುವುದನ್ನ ಅವಲೋಕಿಸೋಣ.