ಬದುಕು ಎಂದಿಗೂ ಜೀವನ್ಮುಖಿ. ಇದರ ಅರ್ಥ ಬಹಳ ಸರಳ. ಜೀವನ ಎಲ್ಲರಿಗೂ ಒಂದು ಮರು ಅವಕಾಶ ಕೊಡುತ್ತದೆ. ಕೋವಿಡ್ ಬಂದಿದೆ ಅಂದ ತಕ್ಷಣ ಜೀವನ ಮುಗಿದು ಹೋಯಿತು ಎನ್ನುವಂತಿಲ್ಲ. ಅದು ಪ್ರಾರಂಭ ಒಂದರ ತಾತ್ಕಾಲಿಕ ಅಂತ್ಯ. ಅಂತ್ಯವೂ ತಾತ್ಕಾಲಿಕ, ಅದು ಮರು ಹುಟ್ಟಿಗೆ ಮುನ್ನುಡಿ.
ಬದುಕು ಅಥವಾ ಆರ್ಥಿಕತೆ ಎನ್ನುವುದು ಒಂದು ಸುದೀರ್ಘ ಪಯಣವಿದ್ದಂತೆ. ಅದೊಂದು ವಿಡಿಯೋ ಚಿತ್ರವೇ ಹೂರತು ಸ್ಟಿಲ್ ಫೋಟೋವಲ್ಲ. ಹೀಗೆ ಹೇಳಲು ಕಾರಣವೇನು ಗೊತ್ತೇ? ಒಂದು ಫೋಟೋದಲ್ಲಿ ನೀವು ಚೆನ್ನಾಗಿ ಕಾಣಬಹುದು ಅಥವಾ ಚನ್ನಾಗಿ ಕಾಣದೆ ಇರಬಹುದು , ಅಂದ ಮಾತ್ರಕ್ಕೆ ಅದು ಸತ್ಯವಲ್ಲ. ವಿಡಿಯೋದಲ್ಲಿ ಮಾತ್ರ ನಮ್ಮ ನಿಜವಾದ ಬಣ್ಣ ಗೊತ್ತಾಗುತ್ತೆ. ಇದರ ಅರ್ಥ ಕೂಡ ಸರಳ. ಚಲನಶೀಲವಾದ ಬದುಕಿನಲ್ಲಿ ನಿಜವಾಗಿ ಸಮರ್ಥವಿದ್ದ ಯಾವುದೇ ಬಿಸಿನೆಸ್ ಅಥವಾ ಐಡಿಯಾಗಳು ಎಂದೂ ಸೋಲುವುದಿಲ್ಲ. ಅವು ತಾತ್ಕಾಲಿಕ ಹಿನ್ನಡೆಗೆ ತುತ್ತಾಗಿರುತ್ತವೆ ಅಷ್ಟೇ. ಇಷ್ಟೆಲ್ಲಾ ಪೀಠಿಕೆ ಏಕೆಂದರೆ ಲಾಕ್ ಡೌನ್ ತೆರೆಯಯಲ್ಪಟ್ಟಿದೆ. ಬೆಂಗಳೂರು ಮಹಾನಗರಿಯಲ್ಲಿ ಹೆಚ್ಚು ಕಡಿಮೆ ಟ್ರಾಫಿಕ್ ಹಿಂದಿನ ಮಟ್ಟವನ್ನ ಮುಟ್ಟುತ್ತಿದೆ. ಇದೊಂದು ಬದುಕು ಮರಳಿ ಹಳಿಗೆ ಬರುತ್ತಿರುವ ಸೂಚನೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಕೂಡ ಕಚ್ಚಾ ತೈಲದ ಬೆಲೆ ಬ್ಯಾರಲ್ ಗೆ 80 ಡಾಲರ್ ತಲುಪಿದೆ. ಕೋವಿಡ್ ಕಾರಣ ಜಗತ್ತಿನಲ್ಲಿ ತೈಲದ ಬೇಡಿಕೆ ಕುಸಿದು ಅಮೆರಿಕಾದ ತೈಲ ಬೆಲೆ ಮೈನಸ್ ನಲವತ್ತು ಡಾಲರ್ ಗೆ ತಲುಪಿ ಅದು ಮಾರುಕಟ್ಟೆಯಲ್ಲಿ ತಲ್ಲಣ ಉಂಟು ಮಾಡಿತ್ತು. ಗಮನಿಸಿ ನೋಡಿ ಕೇವಲ ಏಳೆಂಟು ವಾರದ ಹಿಂದೆ ತೈಲ ಮಾರುಕಟ್ಟೆ ಮುಂದೆ ಚೇತರಿಸಿಕೊಳ್ಳುವುದಿಲ್ಲವೇನೂ ಎನ್ನುವ ಮಟ್ಟಕ್ಕೆ ಜನ, ಹೂಡಿಕೆದಾರರು ಪ್ಯಾನಿಕ್ ಗೆ ಒಳಗಾಗಿದ್ದರು. ಇಂದು ಅದೇ ತೈಲದ ಬೆಲೆ ಬ್ಯಾರಲ್ ಗೆ 8೦ ಡಾಲರ್!. ಬದಲಾವಣೆ ಜಗದ ನಿಯಮ. ನಮ್ಮ ಬಿಪಿ ಗ್ರಾಫ್ ಏರುಪೇರಿಲ್ಲದೆ ಸಮವಾಗಿಬಿಟ್ಟರೆ ಅದಕ್ಕೆ ವೈದ್ಯಕೀಯ ವಿಜ್ಞಾನದಲ್ಲಿ ಸಾವು ಎನ್ನುತ್ತಾರೆ ಅಲ್ಲವೇ? ಆರ್ಥಿಕತೆ ಇರಬಹುದು ಅಥವಾ ಬದುಕಿರಬಹುದು ಏಳು-ಬೀಳು ಸಾಮಾನ್ಯ. ಏರಿದ್ದು ಇಳಿಯಬೇಕು ಹಾಗೆ ಇಳಿದದ್ದು ಕೂಡ ಮೇಲೇರಲೇಬೇಕು ಅದು ಜಗದ ನಿಯಮ, ಪ್ರಕೃತಿ ನಿಯಮ.
ಹೆಚ್ಚಿರುವ ಕಚ್ಚಾ ತೈಲದ ಬೆಲೆ ಜಗತ್ತಿನಲ್ಲಿ ಮತ್ತೆ ತೈಲದ ಮೇಲಿನ ಬೇಡಿಕೆ ಹೆಚ್ಚಾಗಿದೆ ಎನ್ನುವ ಸಂದೇಶವನ್ನ ರವಾನಿಸುತ್ತಿದೆ. ತೈಲದ ಬೆಲೆ ಹೆಚ್ಚಾಗಿದೆ ಎನ್ನುವುದು ಸಮಾಜ ಮತ್ತೆ ಉತ್ಪಾದನೆಗೆ, ಓಡಾಡಕ್ಕೆ ಮರಳಿದೆ ಎಂದರ್ಥ. ಇದು ಶುಭ ಸೂಚನೆ.
ನಮ್ಮ ಭಾರತದಲ್ಲಿ ಕೂಡ ಹಲವಾರು ವಲಯಗಳು ಚೇತರಿಕೆ ಕಂಡು ಒಳ್ಳೆಯ ವ್ಯಾಪಾರ ವೃದ್ಧಿಯನ್ನ ದಾಖಲಿಸುತ್ತಿದೆ. ಅವುಗಳ ಬಗ್ಗೆ ಒಂದಷ್ಟು ತಿಳಿದುಕೊಂಡು ಸಂಕಷ್ಟದಲ್ಲಿರುವ ವಲಯಗಳ ಬಗ್ಗೆ ಕೂಡ ಒಂದಷ್ಟು ವಿವರಗಳನ್ನ ನೋಡೋಣ.
ಬದುಕೆಂದರೆ ಒಂದು ನಾಣ್ಯದಂತೆ. ಅದಕ್ಕೆ ಎರಡು ಮುಖ ಇದ್ದೇ ಇರುತ್ತದೆ. ಕೆಲವೊಮ್ಮೆ ಸನ್ನಿವೇಶಕ್ಕೆ ತಕ್ಕಂತೆ ಅದು ಹೆಚ್ಚಾಗಲೂಬಹುದು. ಹಲವಾರು ವಲಯಗಳು ತೀವ್ರವಾಗಿ ಸಮಸ್ಯೆಗಳನ್ನ ಎದುರಿಸುತ್ತಿವೆ.
ಕೊನೆ ಮಾತು: ಮೊದಲ ಸಾಲುಗಳಲ್ಲಿ ಹೇಳಿದಂತೆ ಬದುಕೆಂದರೆ ಇಷ್ಟೇ ಎನ್ನುವಂತಿಲ್ಲ. ಆರ್ಥಿಕತೆಯೂ ಕೂಡ ಇದಕ್ಕೆ ಹೊರತಲ್ಲ. ಹಲವಾರು ವಲಯಗಳು ಮತ್ತೆ ವ್ಯಾಪಾರ ವಹಿವಾಟು ಶುರು ಮಾಡಿಕೊಂಡಿವೆ. ಹಲವು ಮೇಲೇಳುತ್ತಿವೆ. ಹಲವು ಇನ್ನು ಮಕಾಡೆ ಮಲಗಿವೆ. ಹೇಗೆ ಒಬ್ಬ ಮನುಷ್ಯ ಸದಾ ಓಡುತ್ತಲೇ ಇರಲು ಸಾಧ್ಯವಿಲ್ಲವೂ ಹಾಗೆಯೇ ವ್ಯಾಪಾರ ಕೂಡ ಸದಾ ಹೆಚ್ಚಾಗುತ್ತಿರಲು ಸಾಧ್ಯವಿಲ್ಲ. ಬಹಳಷ್ಟು ಓಡಿದ ವ್ಯಕ್ತಿ ದಣಿವಾರಿಸಲು ಕುಳಿತುಕೊಳ್ಳಲೇ ಬೇಕು ಅಲ್ಲವೇ? ವ್ಯಾಪಾರವೂ ಹಾಗೆ, ಆರ್ಥಿಕತೆಯೂ ಹಾಗೆ ಸದಾ ಬುಲ್ ರನ್ ಸಾಧ್ಯವಿಲ್ಲದ ಮಾತು. ಸದ್ಯದ ಸಮಯವನ್ನ ದಣಿವಾರಿಸಿಕೊಳ್ಳಲು ಕುಳಿತ ಸಮಯ ಎಂದುಕೊಳ್ಳಬೇಕು. ಈ ಸಮಯದಲ್ಲಿ ಹೊಸ ಚೈತನ್ಯವನ್ನ ಕ್ರೋಡೀಕರಿಸಿಕೊಂಡು ಹೊಸ ಹುಮ್ಮಸ್ಸಿನಿಂದ ಮತ್ತೆ ತಮ್ಮ-ತಮ್ಮ ಕಾರ್ಯಕ್ಷೇತ್ರಕ್ಕೆ ಧುಮುಕಬೇಕಿದೆ. ನೆನಪಿರಲಿ ಬದುಕು ಎಂದಿಗೂ ಜೀವನ್ಮುಖಿ.
- ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Advertisement