ಕೋವಿಡ್ ಹತ್ತಾರು ವರ್ಷದಿಂದ ಕಟ್ಟಿದ್ದ ಸಂಸ್ಥೆಗಳನ್ನ ನೆಲ ಕಚ್ಚಿಸಿದೆ. ಈ ಸಮಸ್ಯೆ ಎಲ್ಲಿಯವರೆಗೆ ಮುಂದುವರಿಯಬಹುದು ಎನ್ನುವ ನಿಖರತೆ ಕೂಡ ಯಾರಿಗೂ ಇಲ್ಲ. ಒಂದು ಅಂದಾಜಿನ ಪ್ರಕಾರ ಮಾರ್ಚ್ ಅಥವಾ ಏಪ್ರಿಲ್ 2021ರ ವೇಳೆಗೆ ಕೋವಿಡ್ ಲಸಿಕೆ ಬರತ್ತದೆ. ಇದನ್ನ ಜಗತ್ತಿನ ಕೊನೆಯ ಪ್ರಜೆಯವರಿಗೆ ತಲುಪಿಸಲು ಇನ್ನೊಂದು ವರ್ಷ ಖಂಡಿತ ಬೇಕಾಗುತ್ತದೆ.
ಅಲ್ಲಿಯವರೆಗೆ ವ್ಯಾಪಾರಸ್ಥರು ಏನು ಮಾಡಬೇಕು? ಹತ್ತಾರು ವರ್ಷ ಕಟ್ಟಿ ಬೆಳಸಿದ ಸಂಸ್ಥೆ ಕಣ್ಣೆದುರಿಗೆ ನಶಿಸಿ ಹೋಗುವುದನ್ನ ಯಾರು ತಾನೇ ಸಹಿಸಿಕೊಳ್ಳಲು ಸಾಧ್ಯ? ಯಶಸ್ವಿ ಉದ್ಯಮಿ ಎನ್ನಿಸಿಕೊಳ್ಳಲು ಹತ್ತಾರು ಮೂಲಭೂತ ತತ್ವಗಳನ್ನ ಪಾಲಿಸಬೇಕಾಗುತ್ತದೆ. ಇವತ್ತಿನ ಲೇಖನದಲ್ಲಿ ಅಂತಹ ಒಂದಷ್ಟು ಮೂಲಭೂತ ತತ್ವಗಳ ಬಗ್ಗೆ ತಿಳಿದುಕೊಳ್ಳೋಣ. ಈ ತತ್ವಗಳನ್ನ ಯಾರು ಪಾಲಿಸಕೊಂಡು ಬಂದಿರುತ್ತಾರೆ, ಅಂತಹವರಿಗೆ ಇವತ್ತಿನ ವಿಷಮ ಪರಿಸ್ಥಿತಿಯಲ್ಲಿ ಕೂಡ ಹೆಚ್ಚಿನ ಹೊಡೆತ ಬೀಳುವುದಿಲ್ಲ. ಯಾರು ಈ ತತ್ವವನ್ನ ಈ ಹಿಂದೆ ಅಳವಡಿಸಿಕೊಳ್ಳಲು ವಿಫಲರಾದರೂ ಅವರಿಗೆ ಈಗ ಇದನ್ನ ಅಳವಡಿಸಿಕೊಳ್ಳಲು ಸಿಕ್ಕ ಅವಕಾಶ ಎಂದು ಧನಾತ್ಮಕವಾಗಿ ತಿಳಿದು ಇದನ್ನ ಅಳವಡಿಸಿಕೊಳ್ಳುವುದು ಉತ್ತಮ.
ಸರಳ ವ್ಯಾಪಾರಕ್ಕೆ ಬೇಕು ಸರಳ ಸೂತ್ರಗಳು:
ಮೇಲಿನ ಸೂತ್ರಗಳನ್ನ ಪಾಲಿಸುವುದರ ಜೊತೆಗೆ ವ್ಯಾಪಾರಸ್ಥರು ಮಾಡುವ ಸಾಮಾನ್ಯ ತಪ್ಪುಗಳನ್ನ ಕಡಿಮೆ ಮಾಡಿದರೆ ಕೂಡ ಗೆಲುವುದು ಸಿಗುತ್ತದೆ. ಸಾಮಾನ್ಯವಾಗಿ ಮಾಡುವ ತಪ್ಪುಗಳ ಪಟ್ಟಿ ಹೀಗಿದೆ
ಕೊನೆ ಮಾತು: ಮೇಲಿನ ಸೂತ್ರಗಳನ್ನ ಪಾಲಿಸಿದ ಮಾತ್ರಕ್ಕೆ ಯಶಸ್ಸು ಪಕ್ಕಾ ಎಂದು ತಿಳಿದರೆ ಅದು ತಪ್ಪು. ಇವುಗಳನ್ನ ಪಾಲಿಸದಿದ್ದರೆ ಸೋಲು ಮಾತ್ರ ಗ್ಯಾರಂಟಿ. ಹೀಗಾಗಿ ಈ ಸರಳ ಸೂತ್ರಗಳನ್ನ ಪಾಲಿಸುತ್ತಿರಬೇಕು. ಜೊತೆಗೆ ಸದಾ ಎಚ್ಚರಿಕೆಯ ಸ್ಥಿತಿಯಲ್ಲಿದ್ದು ಸಮಾಜದ ಆಗು ಹೋಗುಗಳ ಮೇಲೆ ಹದ್ದಿನ ಕಣ್ಣಿಟ್ಟಿರಬೇಕು. ಬದಲಾದ ಸನ್ನಿವೇಶಕ್ಕೆ ತಕ್ಷಣ ಹೊಂದಿಕೊಳ್ಳುವ ಚಾಕಚಕ್ಯತೆ ಬೆಳೆಸಿಕೊಳ್ಳಬೇಕು. ಅಯ್ಯೋ ಇದು ನಮ್ಮಪ್ಪ ಪ್ರಾರಂಭಿಸಿದ ವ್ಯಾಪಾರ ಎನ್ನುವ ಸೆಂಟಿಮೆಂಟಿನ ಜೊತೆಗೆ ಹೊಸ ಆವಿಷ್ಕಾರ, ತಂತ್ರಜ್ಞಾನದ ಸಾಥ್ ಕೂಡ ಬೇಕೇ ಬೇಕು. ವ್ಯಾಪಾರ ನಿಲ್ಲುವುದಕ್ಕೆ ಒಂದೇ ಒಂದು ಸಿಂಗಲ್ ರೆಸಿಪಿ ಇಲ್ಲ. ಮೇಲಿನ ಸೂತ್ರಗಳ ಬಳಸಿ ಹೊಸ ಹೊಸ ಕಷಾಯ ರೆಡಿ ಮಾಡುತ್ತಿರಬೇಕು.
ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Advertisement