
ಜಗತ್ತಿನ ಎಲ್ಲಾ ದೇಶಗಳ ಷೇರು ಮಾರುಕಟ್ಟೆಯಂತೆ ಭಾರತೀಯ ಷೇರು ಮಾರುಕಟ್ಟೆ ಕೂಡ ಅತ್ತಿತ್ತ ವಾಲಾಡುತ್ತಲೇ ಇರುತ್ತದೆ. ಮಾರುಕಟ್ಟೆ ಕುಸಿತಕ್ಕೆ ಹತ್ತಾರು ಕಾರಣಗಳನ್ನ ನೀಡಬಹುದು ಹಾಗೆಯೇ ಮಾರುಕಟ್ಟೆಯ ಚೇತರಿಕೆಗೆ ಕೂಡ ಹತ್ತಾರು ಆಯಾಮಗಳು ಇರುತ್ತವೆ. ಇದರಲ್ಲಿ ನಾವು ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಮಾರುಕಟ್ಟೆ ಸದಾ ಏರಿಳಿತದಿಂದ ಕೂಡಿರುತ್ತದೆ. ಅದು ಎಂದಿಗೂ ಫ್ಲಾಟ್ ಆಗಿರಲು ಸಾಧ್ಯವಿಲ್ಲ, ಇದ್ದರೂ ಅದು ಕೇವಲ ಸೀಮಿತ ಅವಧಿಯಲ್ಲಿ ಮಾತ್ರ ಇರುತ್ತದೆ. ಉದಾಹರಣೆಗೆ ಎಫ್ ಐಐ ಅಂದರೆ ಫಾರಿನ್ ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್ಗಳನ್ನ ತೆಗೆದುಕೊಳ್ಳೋಣ. ಈ ವರ್ಷದ ಪ್ರಾರಂಭದಿಂದ ಅಂದರೆ ಜನವರಿ 2022 ರಿಂದ ಜೂನ್ ಅಂತ್ಯದವರೆಗೆ ಭಾರತದ ಷೇರು ಮಾರುಕಟ್ಟೆಯಿಂದ ಈ ರೀತಿಯ ಹೂಡಿಕೆದಾರರು ಹೊರತೆಗೆದ ಹಣ 27 ಬಿಲಿಯನ್ ಅಮೆರಿಕನ್ ಡಾಲರ್.
ಇನ್ನೇನು ಭಾರತಕ್ಕೆ ಇಂತಹ ಹೂಡಿಕೆಗಳು ಬರುತ್ತವೆಯೂ ಇಲ್ಲವೋ ಎನ್ನುವಂತೆ ಎಲ್ಲರೂ ಹಣವನ್ನ ಇಲ್ಲಿಂದ ತೆಗೆದು ಹೊರಟುಬಿಟ್ಟಿದ್ದರು, ಇದೀಗ ಅಂದರೆ ಜುಲೈ ತಿಂಗಳಲ್ಲಿ ಮತ್ತು ಆಗಸ್ಟ್ ತಿಂಗಳ ಮೊದಲ ವಾರದ ಲೆಕ್ಕಾಚಾರದ ಪ್ರಕಾರ 6.4 ಬಿಲಿಯನ್ ಹಣವನ್ನ ಮತ್ತೆ ಮರು ಹೂಡಿಕೆ ಮಾಡಿದ್ದಾರೆ. ಗಮನಿಸಿ ನೋಡಿ 6 ತಿಂಗಳಲ್ಲಿ ಹೊರಹೋದ ಹಣ ತಿಂಗಳ ಲೆಕ್ಕಾಚಾರದಲ್ಲಿ ನಾಲ್ಕೂವರೆ ಬಿಲಿಯನ್, ಇದಕ್ಕಿಂತ ಹೆಚ್ಚಿನ ಹಣ ತಿಂಗಳಿಗೆ ಮತ್ತೆ ಮರಳಿ ಭಾರತೀಯ ಷೇರು ಮಾರುಕಟ್ಟೆಗೆ ಬರುತ್ತಿದೆ. ಇದು ಆರಂಭ ಮಾತ್ರ ಮುಂಬರುವ ದಿನಗಳಲ್ಲಿ ಇದರ ವೇಗ ಇನ್ನಷ್ಟು ಹೆಚ್ಚಾದರೆ ಅಚ್ಚರಿ ಪಡಬೇಕಾಗಿಲ್ಲ.
ಇದಕ್ಕೆ ಕಾರಣಗಳೇನು ಎನ್ನುವುದನ್ನ ತಿಳಿದುಕೊಳ್ಳುವ ಮುನ್ನ, ಎಫ್ ಐಐ-ಫಾರಿನ್ ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್ ಎಂದರೇನು ಎನ್ನುವುದನ್ನ ತಿಳಿದುಕೊಳ್ಳುವ ಪ್ರಯತ್ನವನ್ನ ಮಾಡೋಣ.
ಭಾರತ ದೇಶದಲ್ಲಿ ಅಲ್ಲದೆ ತನ್ನ ಮುಖ್ಯ ಕಛೇರಿಯನ್ನ ಬೇರೆ ದೇಶದಲ್ಲಿ ಹೊಂದಿರುವ ಯಾವುದೇ ಸಂಸ್ಥೆ, ಯಾವುದೇ ರೀತಿಯಲ್ಲಿ ಭಾರತೀಯ ಹಣಕಾಸು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಅವುಗಳನ್ನ ಫಾರಿನ್ ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್ ಎನ್ನಲಾಗುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಮತ್ತು ಚೀನಾ ದೇಶದ ಮಾರುಕಟ್ಟೆಯಲ್ಲಿ ಮಾತ್ರ ಹೊರ ದೇಶದಿಂದ ಬಂದ ಹೂಡಿಕೆಗೆ ಈ ಹೆಸರಿನಿಂದ ಕರೆಯಲಾಗುತ್ತದೆ.
ಹೆಡ್ಜ್ ಫಂಡ್, ಇನ್ಶೂರೆನ್ಸ್ ಫಂಡ್, ಇನ್ವೆಸ್ಟ್ಮೆಂಟ್ ಬ್ಯಾಂಕ್ಸ್, ಪೆನ್ಷನ್ ಫಂಡ್ಸ್, ಮ್ಯೂಚುಯಲ್ ಫಂಡ್ಸ್ ಗಳಲ್ಲಿನ ಹೂಡಿಕೆಯನ್ನ ಕೂಡ ಎಫ್ ಐಐ ಎಂದು ಪರಿಗಣಿಸಲಾಗುತ್ತದೆ. ಈ ರೀತಿಯ ವಿದೇಶದಿಂದ ಬರುವ ಹಣ ಮಾರುಕಟ್ಟೆಯಲ್ಲಿ ಬಂಡವಾಳ ಹೆಚ್ಚಳಕ್ಕೆ ಕಾರಣವಾಗುತ್ತದೆ. ದೇಶದ ಅಭಿವೃದಿಗೆ ಕೂಡ ಕಾರಣವಾಗುತ್ತದೆ. ಹೀಗಿದ್ದೂ ಎಲ್ಲಾ ದೇಶಗಳೂ ಈ ರೀತಿಯ ಹಣವನ್ನ ಪೂರ್ಣವಾಗಿ ಸ್ವಾಗತಿಸುವುದಿಲ್ಲ. ಇವುಗಳ ಮೇಲೆ ಬಹಳಷ್ಟು ನಿಬಂಧನೆಗಳನ್ನ ಹಾಕುತ್ತದೆ. ಭಾರತದಲ್ಲಿ ಕೂಡ ಇದಕ್ಕೆ ಹಲವಾರು ನಿಬಂಧನೆಗಳಿವೆ. ಎಲ್ಲಕ್ಕೂ ಮೊದಲು ಈ ರೀತಿಯ ಹೂಡಿಕೆ ಮಾಡುವ ಸಂಸ್ಥೆ 'ಸೆಬಿ'ಯಲ್ಲಿ ನೋಂದಾವಣಿ ಮಾಡಿಕೊಳ್ಳಬೇಕಾಗುತ್ತದೆ. ಎಲ್ಲಾ ವಲಯಗಳಲ್ಲಿ ಇದನ್ನ ಮುಕ್ತವಾಗಿ ಹೂಡಿಕೆ ಮಾಡಲು ಬಿಡುವುದರಿಂದ ಇವುಗಳ ಪ್ರಭಾವ ಹೆಚ್ಚಾಗುವುದು ದೇಶದ ಹಿತದೃಷ್ಟಿಯಿಂದ ಅಷ್ಟು ಒಳ್ಳೆಯದಲ್ಲ ಎನ್ನುವ ಕಾರಣಕ್ಕೆ, ಇದಕ್ಕೆ ಹಲವು ವಲಯದಲ್ಲಿ ಅವಕಾಶವಿಲ್ಲ.
ಇದನ್ನೂ ಓದಿ: ಭಾರತದ ಆರ್ಥಿಕತೆ ಕೂಡ ಕುಸಿತ ಕಾಣಲಿದೆಯೆ?
ಕೇವಲ 5-6 ತಿಂಗಳ ಹಿಂದೆ ಭಾರತೀಯ ಮಾರುಕಟ್ಟೆಗೆ bye ಹೇಳಿ ಹೋಗಿದ್ದ ಎಫ್ ಐಐ ಗಳು ಮತ್ತೆ ಭಾರತಕ್ಕೆ ಬರಲು ಈ ಬಗೆಯ ಆತುರ ತೋರಲು ಕಾರಣವೇನಿರಬಹುದು?
ಕೊನೆಮಾತು: ಭಾರತದಲ್ಲಿ ಹಣದುಬ್ಬರ ನಿಲ್ಲುವಂತೆ ಕಾಣುತ್ತಿಲ್ಲ, ಆಗಸ್ಟ್ ತಿಂಗಳಲ್ಲಿ ಕೂಡ ಆಹಾರ ಧಾನ್ಯಗಳ ಬೆಲೆ 9/8 ಪ್ರತಿಶತ ಹೆಚ್ಚಾಗಿದೆ. ರಿಸರ್ವ್ ಬ್ಯಾಂಕ್ ಬಡ್ಡಿ ದರವನ್ನ ಏರಿಸುತ್ತಲೇ ಇದೆ, ಇದು ಇನ್ನು ಒಂದು ಪ್ರತಿಶತ ಏರಿಕೆಯಾಗುವ ಸಾಧ್ಯತೆಯನ್ನ ತಳ್ಳಿ ಹಾಕುವಂತಿಲ್ಲ. ನೆನಪಿರಲಿ ಇದು ಎರಡು ಅಲುಗಿನ ಕತ್ತಿ ಇದ್ದಹಾಗೆ , ಬಡ್ಡಿ ದರಗಳು ಹೆಚ್ಚಾದಂತೆ ಡೊಮೆಸ್ಟಿಕ್ ಇನ್ವೆಸ್ಟರ್ಸ್ ಷೇರು ಮಾರುಕಟ್ಟೆಯಿಂದ ನಿಧಾನವಾಗಿ ಕಾಲು ತೆಗೆಯುತ್ತಾರೆ. ಇದಕ್ಕೆ ಪುಷ್ಟಿ ನೀಡುವಂತೆ ಜುಲೈ ತಿಂಗಳಲ್ಲಿ 772 ಮಿಲಿಯನ್ ಡಾಲರ್ ಹಣವನ್ನ ಮಾರುಕಟ್ಟೆಯಿಂದ ಸ್ಥಳೀಯ ಹೂಡಿಕೆದಾರರು ಹೊರ ತೆಗೆದಿದ್ದಾರೆ. ಮುಂಬರುವ ದಿನಗಳಲ್ಲಿ ಬಡ್ಡಿ ದರ ಹೆಚ್ಚಾದಂತೆ ಈ ಮೊತ್ತ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಎಲ್ಲಕ್ಕೂ ಮುಖ್ಯವಾಗಿ ಹೆಚ್ಚುತ್ತಿರುವ ಬೆಲೆಗಳು ಜನ ಸಾಮಾನ್ಯನನ್ನ ಕಂಗೆಡಿಸುತ್ತವೆ. ಮಾರುಕಟ್ಟೆಯ ಏರಿಳಿತ ಸದಾ ಇದ್ದೆ ಇರುತ್ತದೆ, ಜನ ಸಾಮಾನ್ಯನ ಬದುಕು ಬಹಳ ಏರುಪೇರು ಕಾಣುವುದು ಮಾತ್ರ ಯಾವ ಕೋನದಿಂದಲೂ ಒಳ್ಳೆಯದಲ್ಲ. ಇದರ ದೊರಗಾಮಿ ಪರಿಣಾಮಗಳು ಬಹಳ ಕೆಟ್ಟವಾಗಿರುತ್ತದೆ. ಹೀಗಾಗಿ ಎಲ್ಲಕ್ಕೂ ಮುಖ್ಯವಾಗಿ ಭಾರತದ ಮುಂದಿನ ಸವಾಲು ಹಣದುಬ್ಬರವನ್ನ ನಿಯಂತ್ರಣಕ್ಕೆ ತರುವುದು , ಇದಾಗದಿದ್ದರೆ ಯಾವ ಅಭಿವೃದ್ಧಿಯೂ ಲೆಕ್ಕಕ್ಕೆ ಬರುವುದಿಲ್ಲ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Advertisement