ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದಕ್ಕೆ ನೆಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ವಿಡಿಯೋ ವೈರಲ್ ಆಗುತ್ತಿದ್ದಂತೆ ಇದಕ್ಕೆ ಸ್ಪಷ್ಟನೆ ನೀಡಿರುವ ಬಿಸಿಸಿಐ ಪಂತ್ ಮಾತುಗಳನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ. ಸಂದೀಪ್ ಲಮಿಚೆನ್ನೆರ ಎಸೆತವನ್ನು ರಾಬಿನ್ ಉತ್ತಪ್ಪ ಎದುರಿಸುವ ಮುನ್ನವೇ ಯೇ ತೋ ಚೌಕಾ ಹೇ(ಇದು ಬೌಂಡರಿ ಆಗಲಿದೆ) ಎಂದು ಹೇಳಿದ್ದರು. ನಿರೀಕ್ಷೆಯಂತೆಯೇ ಉತ್ತಪ್ಪ ಆ ಎಸೆತದಲ್ಲಿ ಕವರ್ಸ್ ನಲ್ಲಿ ಬೌಂಡರಿ ಬಾರಿಸಿದ್ದರು.