ಸತತ 5ನೇ ಪಂದ್ಯ ಸೋಲು: ಆರ್‌ಸಿಬಿ ಬೌಲರ್ಗಳಿಗೆ ಧೈರ್ಯ ಸಾಲದು; ಕೊಹ್ಲಿ ಆಕ್ರೋಶ

ಈ ಸಲ ಕಪ್ ನಮ್ದೆ ಎಂದು ಹೇಳಿಕೊಂಡು ತಿರುಗುತ್ತಿದ್ದ ಆರ್‌ಸಿಬಿ ಅಭಿಮಾನಿಗಳಿಗೆ ತಂಡ ಸತತ ಐದು ಪಂದ್ಯಗಳಲ್ಲಿ ಸೋಲು ಕಂಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
ಬೆಂಗಳೂರು: ಈ ಸಲ ಕಪ್ ನಮ್ದೆ ಎಂದು ಹೇಳಿಕೊಂಡು ತಿರುಗುತ್ತಿದ್ದ ಆರ್‌ಸಿಬಿ ಅಭಿಮಾನಿಗಳಿಗೆ ತಂಡ ಸತತ ಐದು ಪಂದ್ಯಗಳಲ್ಲಿ ಸೋಲು ಕಂಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಈ ಮಧ್ಯೆ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಬೌಲರ್ಗಳಿಗೆ ಧೈರ್ಯ ಸಾಲದು ಎಂದು ಕಿಡಿಕಾರಿದ್ದಾರೆ.
ನಿನ್ನೆ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲೂ ಆರ್ಸಿಬಿ 5 ವಿಕೆಟ್ ಗಳಿಂದ ಸೋಲು ಕಂಡಿತ್ತು. ಇದರಿಂದ ಬೌಲರ್ ಗಳ ವಿರುದ್ಧ ವಿರಾಟ್ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
206 ರನ್ ಟಾರ್ಗೆಟ್ ನೀಡಿದ್ದರೂ ಈ ಪಂದ್ಯದಲ್ಲಿ ಸೋಲ್ತೀವಿ ಅಂದುಕೊಂಡಿರಲಿಲ್ಲ. ಆದರೆ ಕೊನೆಯ ನಾಲ್ಕು ಓವರ್ ಗಳಲ್ಲಿನ ಬೌಲಿಂಗ್ ಅಂತೂ ಒಪ್ಪಲಾಗದು. ಐಪಿಎಲ್ ನಲ್ಲಿ ನಾವು ನಿಜವಾಗಿ ತೋರಿಸಬೇಕಿರುವ ಆಟ ಆಡಲಾಗುತ್ತಿಲ್ಲ. ಸಾಕಷ್ಟು ಧೈರ್ಯವಿಲ್ಲದೇ ಈ ರೀತಿ ಬೌಲಿಂಗ್ ಮಾಡಿದರೆ ಅಂಗಳದಲ್ಲಿ ರಸಲ್ ನಂತಹ ಹೊಡಿಬಡಿ ಆಟಗಾರನಿದ್ದಾಗ ನಮಗೆ ತೀರ ಕಠಿಣ ಎನಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.
ಕಳಪೆ ಬೌಲಿಂಗ್ ಪ್ರದರ್ಶನ ನೀಡಿದರೆ ನಾವು ಒತ್ತಡ ಸನ್ನಿವೇಶಗಳನ್ನು ಸಮರ್ಥವಾಗಿ ನಿಭಾಯಿಸಲು ಆಗುವುದಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com