ಪ್ರತಿಯೊಬ್ಬರು ಮನುಷ್ಯರೇ: ಅಂಪೈರ್ ಜೊತೆ ವಾಗ್ವಾದ, ಧೋನಿ ಕೈಹಿಡಿದ ಗಂಗೂಲಿ!

ಐಪಿಎಲ್ ಪಂದ್ಯಾವಳಿಯ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ನೋಬಾಲ್ ಕುರಿತಂತೆ ಅಂಪೈರ್ ಜೊತೆ ಚೆನ್ನೈ ತಂಡದ ನಾಯಕ ಎಂಎಸ್ ಧೋನಿ ವಾಗ್ವಾದ ಕುರಿತಂತೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗಿದ್ದು ಧೋನಿ...
ಸೌರವ್ ಗಂಗೂಲಿ-ಎಂಎಸ್ ಧೋನಿ
ಸೌರವ್ ಗಂಗೂಲಿ-ಎಂಎಸ್ ಧೋನಿ
ಕೋಲ್ಕತ್ತಾ: ಐಪಿಎಲ್ ಪಂದ್ಯಾವಳಿಯ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ನೋಬಾಲ್ ಕುರಿತಂತೆ ಅಂಪೈರ್ ಜೊತೆ ಚೆನ್ನೈ ತಂಡದ ನಾಯಕ ಎಂಎಸ್ ಧೋನಿ ವಾಗ್ವಾದ ಕುರಿತಂತೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗಿದ್ದು ಧೋನಿ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು. 
ಅಂಪೈರ್ ಜೊತೆ ವಾಗ್ವಾದ ಸಂಬಂಧ ಎಂಎಸ್ ಧೋನಿಯನ್ನು ಬ್ಯಾನ್ ಮಾಡುವ ಸಾಧ್ಯತೆ ಇತ್ತು. ಆದರೆ ಕೊನೆಗೆ ಪಂದ್ಯದ ಶೇ.50ರಷ್ಟು ದಂಡವನ್ನು ಹಾಕಿ ಬಿಡಲಾಗಿತ್ತು. 
ಈ ವಿವಾದ ಕುರಿತಂತೆ ಮಾತನಾಡಿರುವ ಗಂಗೂಲಿ, ಪ್ರತಿಯೊಬ್ಬರು ಮನುಷ್ಯರೇ. ಅವರ ಸ್ಪರ್ಧಾತ್ಮಕತೆ ಏನು? ಇದು ಗಮನಾರ್ಹವಾಗಿದೆ. ಕೆಲವೊಮ್ಮೆ ಭಾವನಾತ್ಮಕ ಪರಿಸ್ಥಿತಿಗೆ ಸಿಲುಕಿದಾಗ ಇಂತಹ ಘಟನೆಗಳು ವರದಿಯಾಗುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com