ಆಶಿಶ್ ನೆಹ್ರಾ ಅವರ ಸಲಹೆಯನ್ನು ಚಾಚು ತಪ್ಪದೇ ಕೊಹ್ಲಿ ಅನುಸರಿಸುತ್ತಿದ್ದದ್ದೆ ಸೋಲಿಗೆ ಕಾರಣ ಎನ್ನಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ವ್ಯಾಪಕ ಟ್ರೋಲ್ ಗಳು ಹರಿದಾಡುತ್ತಿದೆ. 19ನೇ ಓವರ್ ಅನ್ನು ಕೊಹ್ಲಿ ಬಲಗೈ ವೇಗಿ ನವದೀಪ್ ಸೈನಿಗೆ ನೀಡಲು ಮುಂದಾಗಿದ್ದರು. ಈ ಹಂತದಲ್ಲಿ ಸ್ಪಿನ್ನರ್ ಗೆ ನೀಡಲು ನೆಹ್ರಾ ಸೂಚಿಸಿದ್ದರು. ಪರಿಣಾಮ ಪವನ್ ನೇಗಿ ದಾಳಿಯಲ್ಲಿ 22 ರನ್ ಚಚ್ಚಿಸಿಕೊಂಡರು. ಇದರೊಂದಿಗೆ ಇನ್ನು ಒಂದು ಓವರ್ ಬಾಕಿ ಇರುವಂತೆ ಪಂದ್ಯದಲ್ಲಿ ಮುಂಬೈ ಗೆಲುವು ಸಾಧಿಸಿತ್ತು.