ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡುತ್ತಿದ್ದ ವೇಳೆ 15ನೇ ಓವರ್ ಗೂ ಮುನ್ನ ಟೈಮ್ ಔಟ್ ತೆಗೆದುಕೊಳ್ಳಲಾಗಿತ್ತು. ಟೈಮ್ ಔಟ್ ಬಳಿಕ ಬೌಲಿಂಗ್ ಗೆ ಅಂಕಿತ್ ರಜಪೂತ್ ಮುಂದಾಗಿದ್ದರು. ಆದರೆ ತಮ್ಮ ಬಳಿ ಚೆಂಡು ಇಲ್ಲ ಎಂದು ಹೇಳಿದರು. ಈ ವೇಳೆ ಪಂಜಾಬ್ ನಾಯಕ ಆರ್ ಅಶ್ವಿನ್ ಚೆಂಡು ಕೊಡುವಂತೆ ಅಂಪೈರ್ ರನ್ನು ಕೇಳಿದರು. ಆಗ ತಮ್ಮ ಬಳಿ ಚೆಂಡು ಇಲ್ಲವೆಂದು ಅಂಪೈರ್ ವಾದಿಸಿದರು.