ನವದೆಹಲಿ: ಈ ಸಲ ಕಪ್ ನಮ್ದೆ ಅಂತಾ ಭಾವಿಸಿದ್ದ ಅಭಿಮಾನಿಗಳಿಗೆ ಆರ್ಸಿಬಿ ತಂಡ ಸತತ 6 ಪಂದ್ಯಗಳ ಸೋಲುಗಳಿಂದ ದೊಡ್ಡ ಶಾಕ್ ನೀಡಿತ್ತು. ತಂಡ ಸತತ ಸೋಲು ಕಂಡಾಗ ಪ್ರತಿಯೊಬ್ಬರು ತೆಗೆಳುತ್ತಿದ್ದರು. ಇದೀಗ ಫಿನಿಕ್ಸ್ ಪಕ್ಷಿಯಂತೆ ಎದ್ದು ಬಂದಾಗ ಯಾರೂ ಸಹ ಮಾತನಾಡುತ್ತಿಲ್ಲ ಎಂದು ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.