ದೆಹಲಿಯ ಫಿರೋಜ್ ಶಾ ಕೋಟ್ಲಾ ನಡೆದ ಪಂದ್ಯದಲ್ಲಿ ಆರ್ಸಿಬಿ 16 ರನ್ ಗಳಿಂದ ಸೋಲು ಕಂಡಿತ್ತು. ಆ ಮೂಲಕ ಆರ್ಸಿಬಿ ಪ್ಲೇ ಆಫ್ ಕನಸು ಭಗ್ನಗೊಂಡಿತ್ತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಔಟಾಗಿದ್ದ ಬಳಿಕ ಜಾಣ್ಮೆಯ ಆಟವಾಡುತ್ತಿದ್ದ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಸಿಡಿಸಿದ ಚೆಂಡನ್ನು ಅಕ್ಷರ್ ಪಟೇಲ್ ಬೌಂಡರಿ ಗೆರೆಯಲ್ಲಿ ಅದ್ಭುತ ಕ್ಯಾಚ್ ಹಿಡಿದಿದ್ದರು. ಇದು ಆರ್ಸಿಬಿಯ ಜಂಗಾಬಲವನ್ನೇ ಕುಗ್ಗಿಸಿತ್ತು. ಅಂತೆ ನಂತರ ಬಂದ ಬ್ಯಾಟ್ಸ್ ಮನ್ ಗಳು ಸಹ ಉತ್ತಮ ಆಟವಾಡದ ಕಾರಣ ತಂಡ 16 ರನ್ ಗಳಿಂದ ಸೋಲು ಕಂಡಿತ್ತು.