ಹಿಂದೂ ತಿರಸ್ಕಾರ: ದನೀಶ್ ಕನೇರಿಯಾ ದುಡ್ಡಿಗಾಗಿ ಏನನ್ನು ಬೇಕಾದರೂ ಹೇಳುತ್ತಾರೆ, ಜಾವೇದ್ ಮಿಯಾಂದಾದ್!

ಪಾಕಿಸ್ತಾನ ಮಾಜಿ ಬೌಲರ್ ದನೀಶ್ ಕನೇರಿಯಾ ಹಿಂದೂ ಎಂಬ ಕಾರಣಕ್ಕೆ ಅವರನ್ನು ಕೀಳಾಗಿ ಕಾಣಲಾಗುತ್ತಿತ್ತು ಎಂದು ಶೋಯಬ್ ಅಖ್ತರ್ ಹೇಳಿಕೆ ಬಳಿಕ ಈ ಚರ್ಚೆ ತೀವ್ರ ಸ್ವರೂಪ ಪಡೆದುಕೊಂಡಿತ್ತು.
ದನೀಶ್ ಕನೇರಿಯಾ-ಜಾವೇದ್ ಮಿಯಾಂದಾದ್
ದನೀಶ್ ಕನೇರಿಯಾ-ಜಾವೇದ್ ಮಿಯಾಂದಾದ್

ಇಸ್ಲಾಮಾಬಾದ್: ಪಾಕಿಸ್ತಾನ ಮಾಜಿ ಬೌಲರ್ ದನೀಶ್ ಕನೇರಿಯಾ ಹಿಂದೂ ಎಂಬ ಕಾರಣಕ್ಕೆ ಅವರನ್ನು ಕೀಳಾಗಿ ಕಾಣಲಾಗುತ್ತಿತ್ತು ಎಂದು ಶೋಯಬ್ ಅಖ್ತರ್ ಹೇಳಿಕೆ ಬಳಿಕ ಈ ಚರ್ಚೆ ತೀವ್ರ ಸ್ವರೂಪ ಪಡೆದುಕೊಂಡಿತ್ತು.

ಹೌದು ಶೋಯಬ್ ಅಖ್ತರ್ ಹೇಳಿಕೆ ನಿಜ. ಹಿಂದೂ ಎಂಬ ಕಾರಣಕ್ಕೆ ನಾನು ತಿರಸ್ಕೃತನಾಗಿದ್ದೆ ಎಂದು ಹೇಳಿದ್ದರು. ಇದಕ್ಕೆ ಮಾಜಿ ಪಾಕ್ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ದುಡ್ಡಿಗಾಗಿ ದನೀಶ್ ಕನೇರಿಯಾ ಏನನ್ನು ಬೇಕಾದರೂ ಹೇಳುತ್ತಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. 

“ಅವರು ಏನು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಇನ್ನು ಕನೇರಿಯಾ ಬಗ್ಗೆ ಹೇಳುವುದಾದರೆ ಅವರು ಹಣಕ್ಕಾಗಿ ಏನನ್ನೂ ಬೇಕಾದರೂ ಹೇಳುತ್ತಾರೆ ಮತ್ತು ಅವರಿಗೆ ಕ್ರಿಕೆಟ್‌ನಲ್ಲಿ ಯಾವುದೇ ವಿಶ್ವಾಸಾರ್ಹತೆ ಉಳಿದಿಲ್ಲ ಎಂದು ಮಿಯಾಂದಾದ್ ಪಿಟಿಐಗೆ ತಿಳಿಸಿದರು.

ಇನ್ನು ಶೋಯೆಬ್ ಅಖ್ತರ್ ಹೇಳಿಕೆ ಕುರಿತಂತೆ ತಮ್ಮ ಯೂಟ್ಯೂಬ್ ಚಾನಲ್ ನಲ್ಲಿ ಹೇಳಿಕೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com