ಭದ್ರತಾ ಕೋಟೆಯನ್ನು ಭೇದಿಸಿ ಮೈದಾನ ಪ್ರವೇಶಿಸಿದ ಅಭಿಮಾನಿ, ಮಹೇಂದ್ರ ಸಿಂಗ್ ಧೋನಿ ಅವರ ಕಾಲಿಗೆ ಬಿದ್ದಿದ್ದಾರೆ. ಈ ವೇಳೆ ಅಭಿಮಾನಿಯ ಕೈಲಿದ್ದ ತ್ರಿವರ್ಣ ಧ್ವಜ ಕೆಳಗುರುಳಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಧೋನಿ, ಅಭಿಮಾನಿಯ ಕೈಯಿಂದ ಬಾವುಟವನ್ನು ಪಡೆದು ಸುರಕ್ಷಿತವಾಗಿ ತಲುಪಿಸಿದರು, ಈ ಮೂಲಕ ಎಂಎಸ್ ಧೋನಿ ದೇಶಪ್ರೇಮವನ್ನು ಮೆರೆದಿದ್ದಾರೆ.