ಭಾರತವು ಮುಂಬರುವ ವಿಶ್ವಕಪ್ ಪಂದ್ಯ ಆಡುವಂತೆ ಪಾಕ್ ಅಭಿಮಾನಿ ಮನವಿ

ಕಳೆದ ವರ್ಷ ಏಷ್ಯಾ ಕಪ್ ವೇಳೆ ಭಾರತೀಯ ರಾಷ್ಟ್ರಗೀತೆ ಹಾಡಿ ಭಾರತೀಯರ ಹೃದಯ ಗೆದ್ದಿರುವ ಪಾಕಿಸ್ತಾನ ಅಭಿಮಾನಿ ಆದಿಲ್ ತಾಜ್ , ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯ ನಿಗದಿಯಂತೆ ಆಡುವಂತೆ ಭಾರತಕ್ಕೆ ಕರೆ ನೀಡಿದ್ದಾರೆ.
ಆದಿಲ್ ತಾಜ್
ಆದಿಲ್ ತಾಜ್

ಹೊಸದಿಲ್ಲಿ: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿ ಬೆನ್ನಲ್ಲೇ ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವಂತೆ ವ್ಯಾಪಕ ಒತ್ತಾಯ ಕೇಳಿಬರುತ್ತಿದೆ.

ಈ ಮಧ್ಯೆ ಕಳೆದ ವರ್ಷ ಏಷ್ಯಾ ಕಪ್ ವೇಳೆ ಭಾರತೀಯ ರಾಷ್ಟ್ರಗೀತೆ ಹಾಡಿ ಭಾರತೀಯರ ಹೃದಯ ಗೆದ್ದಿರುವ ಪಾಕಿಸ್ತಾನ ಅಭಿಮಾನಿ ಆದಿಲ್ ತಾಜ್ , ಪಾಕಿಸ್ತಾನ ವಿರುದ್ಧದ  ವಿಶ್ವಕಪ್ ಪಂದ್ಯ ನಿಗದಿಯಂತೆ ಆಡುವಂತೆ ಭಾರತಕ್ಕೆ ಕರೆ ನೀಡಿದ್ದಾರೆ.
ಯುಎಇನಲ್ಲಿ ಇಂದಿಗೂ ಪಾಕ್ ಹಾಗೂ ಭಾರತೀಯರು ಉತ್ತಮ ಬಾಂಧ್ಯವ್ಯ ಹೊಂದಿದ್ದು, ಅತ್ತ ಪಾಕಿಸ್ತಾನ ಆಟಗಾರರು ಭಾರತದ ಜೊತೆಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com