ಬಿಸಿಲು ಹೆಚ್ಚಿದ್ದಿದ್ದರಿಂದ ಕೊನೆಯ ಓವರ್ ಗಳಲ್ಲಿ ಭಾರತದ ಬ್ಯಾಟ್ಸ್ಮನ್ ಗಳು ತಂಪುಪಾನೀಯ ಕುಡಿಯಲು ವಿರಾಮ ತೆಗೆದುಕೊಂಡಿದ್ದರು. ಎಂಥಹ ಒತ್ತಡದ ಪರಿಸ್ಥಿತಿಯಲ್ಲೂ ತಾಳ್ಮೆ ಕಳೆದುಕೊಳ್ಳದ ಕೂಲ್ ಕ್ಯಾಪ್ಟನ್ ಎಂದೇ ಹೆಸರು ಪಡೆದಿದ್ದ ಧೋನಿ ಆ ಸಂದರ್ಭದಲ್ಲಿ ತೀವ್ರ ಸಿಡಿಮಿಡಿಗೊಂಡಿದ್ದು ಅಚ್ಚರಿ ಉಂಟುಮಾಡಿತ್ತು. ವಿರಾಮದ ವೇಳೆ ತಂಪುಪಾನೀಯ ತಂದಿದ್ದ ವಾಟರ್ ಬಾಯ್ ಪಿಚ್ ಮೇಲೆ ನಡೆದಿದ್ದನ್ನು ಗಮನಿಸಿದ ಧೋನಿ ತೀವ್ರವಾಗಿ ಆಕ್ರೋಶಗೊಂಡು ನಿಂದಿಸಿರುವ ವಿಡಿಯೋ ಈಗ ವೈರಲ್ ಆಗತೊಡಗಿದೆ.