ವಾಟರ್ ಬಾಯ್ ನ್ನು ಚೂ.... ಎಂದು ನಿಂದಿಸಿದ ಧೋನಿ: ಕೂಲ್ ಕ್ಯಾಪ್ಟನ್ ಕೋಪಗೊಳ್ಳಲು ಇದು ಕಾರಣ

ಅಡಿಲೇಡ್ ನಲ್ಲಿ ಜ.15 ರಂದು ನಡೆದ ಭಾರತ-ಆಸ್ಟ್ರೇಲಿಯಾ ತಂಡದ 2ನೇ ಏಕದಿನ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ವಾಟರ್ ಬಾಯ್ ಮೇಲೆ ಕೋಪಗೊಂಡ ಘಟನೆ ನಡೆದಿದೆ.
ವಾಟರ್ ಬಾಯ್ ನ್ನು ಚೂ.... ಎಂದು ನಿಂದಿಸಿದ ಧೋನಿ: ಕೂಲ್ ಕ್ಯಾಪ್ಟನ್ ಕೋಪಗೊಳ್ಳಲು ಇದು ಕಾರಣ
ವಾಟರ್ ಬಾಯ್ ನ್ನು ಚೂ.... ಎಂದು ನಿಂದಿಸಿದ ಧೋನಿ: ಕೂಲ್ ಕ್ಯಾಪ್ಟನ್ ಕೋಪಗೊಳ್ಳಲು ಇದು ಕಾರಣ
ಅಡಿಲೇಡ್: ಅಡಿಲೇಡ್ ನಲ್ಲಿ ಜ.15 ರಂದು ನಡೆದ ಭಾರತ-ಆಸ್ಟ್ರೇಲಿಯಾ ತಂಡದ 2ನೇ ಏಕದಿನ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ವಾಟರ್ ಬಾಯ್ ಮೇಲೆ ಕೋಪಗೊಂಡ ಘಟನೆ ನಡೆದಿದೆ. 
ಬಿಸಿಲು ಹೆಚ್ಚಿದ್ದಿದ್ದರಿಂದ ಕೊನೆಯ ಓವರ್ ಗಳಲ್ಲಿ ಭಾರತದ ಬ್ಯಾಟ್ಸ್ಮನ್ ಗಳು ತಂಪುಪಾನೀಯ ಕುಡಿಯಲು ವಿರಾಮ ತೆಗೆದುಕೊಂಡಿದ್ದರು. ಎಂಥಹ ಒತ್ತಡದ ಪರಿಸ್ಥಿತಿಯಲ್ಲೂ ತಾಳ್ಮೆ ಕಳೆದುಕೊಳ್ಳದ ಕೂಲ್ ಕ್ಯಾಪ್ಟನ್ ಎಂದೇ ಹೆಸರು ಪಡೆದಿದ್ದ ಧೋನಿ ಆ ಸಂದರ್ಭದಲ್ಲಿ ತೀವ್ರ ಸಿಡಿಮಿಡಿಗೊಂಡಿದ್ದು ಅಚ್ಚರಿ ಉಂಟುಮಾಡಿತ್ತು. ವಿರಾಮದ ವೇಳೆ ತಂಪುಪಾನೀಯ ತಂದಿದ್ದ ವಾಟರ್ ಬಾಯ್ ಪಿಚ್ ಮೇಲೆ ನಡೆದಿದ್ದನ್ನು ಗಮನಿಸಿದ ಧೋನಿ  ತೀವ್ರವಾಗಿ ಆಕ್ರೋಶಗೊಂಡು ನಿಂದಿಸಿರುವ ವಿಡಿಯೋ ಈಗ ವೈರಲ್ ಆಗತೊಡಗಿದೆ. 
ಲೆಫ್ಟ್ ಆರ್ಮ್ ಪೇಸರ್ ಖಲೀಲ್ ಅಹ್ಮದ್ ಪಿಚ್ ಮೇಲೆ ನಡೆದಿದೆ. ಸಾಮಾನ್ಯವಾಗಿ ಪಿಚ್ ನ ಮತ್ತೊಂದು ಬದಿಗೆ ತೆರಳಬೇಕಾದರೆ ಯಾರೂ ಪಿಚ್ ಮೇಲೆ ನಡೆದು ಹೋಗಬಾರದೆಂಬ ಎಂಬ ನಿಯಮವಿದೆ. ಆದರೆ ಖಲೀಲ್ ಅಹ್ಮದ್ ಪಿಚ್ ಮೇಲೆ ನಡೆದು ಹೋಗಿದ್ದನ್ನು ಕಂಡ ಧೋನಿ ತಾಳ್ಮೆ ಕಳೆದುಕೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com