ಇನ್ನು ಈ ಹಿಂದೆ ಅಂದರೆ ಕಳೆದ ವರ್ಷ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಮಾಡಿದ್ದಾಗ ಏಕದಿನ ಸರಣಿ ವೇಳೆ ಧೋನಿ ಅಂಪೈರ್ ಗಳಿಂದ ಬಾಲ್ ತೆಗೆದುಕೊಂಡಿದ್ದರು. ಇದನ್ನು ಕ್ಯಾಮೆರಾಗಳಲ್ಲಿ ಸೆರೆ ಹಿಡಿದಿದ್ದ ಕೆಲ ಪತ್ರಕರ್ತರು ಧೋನಿ ನಿವೃತ್ತಿ ಕುರಿತು ಯೋಚನೆ ಮಾಡುತ್ತಿದ್ದು, ಇದೇ ಕಾರಣಕ್ಕೆ ಇಂಗ್ಲೆಂಡ್ ಪ್ರವಾಸದ ನೆನಪಿಗಾಗಿ ಬಾಲ್ ತೆಗೆದುಕೊಂಡರು ಎಂದು ವರದಿ ಮಾಡಿದ್ದರು. ಬಳಿಕ ಇದಕ್ಕೆ ಸ್ಪಷ್ಟನೆ ನೀಡಿದ್ದ ಕೋಚ್ ರವಿಶಾಸ್ತ್ರಿ. ಇದು ನಿವೃತ್ತಿಗಾಗಿ ತೆಗೆದುಕೊಂಡಿದ್ದಲ್ಲ. ಪಿಚ್ ನಲ್ಲಿ ಚೆಂಡು ಸಾಕಷ್ಟು ತಿರುವು ಪಡೆಯುತ್ತಿತ್ತು. ಈ ಬಗ್ಗೆ ಬ್ಯಾಟಿಂಗ್ ಕೋಚ್ ಬಂಗಾರ್ ಅವರಿಗೆ ತೋರಿಸಲಿಕ್ಕಾಗಿ ಧೋನಿ ಚೆಂಡನ್ನು ತೆಗೆದುಕೊಂಡಿದ್ದರು ಎಂದು ಸ್ಪಷ್ಟನೆ ನೀಡಿದ್ದರು.