ಎರನಡೇ ಇನ್ನಿಂಗ್ಸ್ನಲ್ಲಿ 34ರನ್ ಗಳಿಸಿದ್ದ ಪೂಜಾರ ವಿನಯ್ ಕುಮಾರ್ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ಎಸ್. ಶರತ್ಗೆ ಕ್ಯಾಚ್ ನೀಡಿದ್ದರು. ಬ್ಯಾಟ್ಗೆ ಚೆಂಡು ತಾಗಿದ್ದು ಗೊತ್ತಿದ್ದರೂ ಪೂಜಾರ ಕ್ರೀಸ್ನಲ್ಲೇ ನಿಂತುಕೊಂಡರು. ಇನ್ನೂ ಅಂಪೈರ್ ಕೂಡ ಔಟ್ ತೀರ್ಪು ನೀಡದೆ ಇರುವುದು ಪೂಜಾರ ಮೋಸಾದಾಟಕ್ಕೆ ಸಾಥ್ ಕೊಡುವಂತಿತ್ತು.. ಅಂಪೈರ್ ಔಟ್ ಕೊಡದಿದ್ದಕ್ಕೆ ಕೋಪಗೊಂಡ ವಿನಯ್ ವಾಗ್ವಾದವನ್ನು ನಡೆಸಿದರು.