ಕ್ರೀಡಾ ಸ್ಪೂರ್ತಿ ಮರೆತ ಚೇತೇಶ್ವರ ಪೂಜಾರ, ಜಂಟಲ್​ಮ್ಯಾನ್ ಗೇಮ್​ಗೆ ಅವಮಾನ!

ರಣಜಿ ಟ್ರೋಫಿ ಸೆಮಿಫೈನಲ್ ನಲ್ಲಿ ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಸೌರಾಷ್ಟ್ರ ತಂಡದ ಬ್ಯಾಟ್ಸ್​ಮನ್ ಚೇತೇಶ್ವರ ಪೂಜಾರ ಕ್ರೀಡಾಸ್ಫೂರ್ತಿ ಹಾಗೂ ಮಾನವೀಯತೆ ಮರೆತು ಬ್ಯಾಟಿಂಗ್ ಮಾಡಿದ್ದಾರೆ.
ಚೇತೇಶ್ವರ ಪೂಜಾರ
ಚೇತೇಶ್ವರ ಪೂಜಾರ
ಬೆಂಗಳೂರು: ರಣಜಿ ಟ್ರೋಫಿ ಸೆಮಿಫೈನಲ್ ನಲ್ಲಿ ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಸೌರಾಷ್ಟ್ರ ತಂಡದ ಬ್ಯಾಟ್ಸ್​ಮನ್ ಚೇತೇಶ್ವರ ಪೂಜಾರ ಕ್ರೀಡಾಸ್ಫೂರ್ತಿ ಹಾಗೂ ಮಾನವೀಯತೆ ಮರೆತು ಬ್ಯಾಟಿಂಗ್ ಮಾಡಿದ್ದಾರೆ. 
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸೆಮಿಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಪೂಜಾರ ಔಟಾಗಿದ್ದು ಗೊತ್ತಾಗಿದ್ದರೂ ಕ್ರೀಸ್​ನಲ್ಲೇ ನಿಂತಿದ್ದರು.  ಇನ್ನು ಎರಡನೇ ಇನ್ನಿಂಗ್ಸ್​ನಲ್ಲೂ ಸಹ ಪೂಜಾರ ಔಟಾಗಿದ್ದರು ಏನು ಆಗಲಿಲ್ಲವೆಂಬಂತೆ ನಿಂತಿದ್ದು ಜಂಟಲ್​ಮ್ಯಾನ್ ಗೇಮ್​ಗೆ ಮೋಸ ಮಾಡಿದ್ದಾರೆ. 
ಎರನಡೇ ಇನ್ನಿಂಗ್ಸ್​ನಲ್ಲಿ 34ರನ್ ಗಳಿಸಿದ್ದ ಪೂಜಾರ ವಿನಯ್ ಕುಮಾರ್ ಬೌಲಿಂಗ್​ನಲ್ಲಿ ವಿಕೆಟ್ ಕೀಪರ್ ಎಸ್. ಶರತ್​ಗೆ ಕ್ಯಾಚ್ ನೀಡಿದ್ದರು. ಬ್ಯಾಟ್​ಗೆ ಚೆಂಡು ತಾಗಿದ್ದು ಗೊತ್ತಿದ್ದರೂ ಪೂಜಾರ ಕ್ರೀಸ್​ನಲ್ಲೇ ನಿಂತುಕೊಂಡರು. ಇನ್ನೂ ಅಂಪೈರ್ ಕೂಡ ಔಟ್ ತೀರ್ಪು ನೀಡದೆ ಇರುವುದು ಪೂಜಾರ ಮೋಸಾದಾಟಕ್ಕೆ ಸಾಥ್ ಕೊಡುವಂತಿತ್ತು.. ಅಂಪೈರ್ ಔಟ್ ಕೊಡದಿದ್ದಕ್ಕೆ ಕೋಪಗೊಂಡ ವಿನಯ್ ವಾಗ್ವಾದವನ್ನು ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com