ಇದೇ ವೇಳೆ ಗೆಲುವಿನ ಕುರಿತು ಮಾತನಾಡಿದ ಕೊಹ್ಲಿ, ಖಂಡಿತಾ ಯಾವುದೇ ತಂಡಕ್ಕೂ ಗೆಲುವು ಖುಷಿ ನೀಡುತ್ತದೆ. ಇಲ್ಲಿಯವರೆಗೂ ಟೂರ್ನಿಯಲ್ಲಿ ನಾವು ಏನು ಮಾಡಿದ್ದೆವೊ ಅದನ್ನೇ ಇಂದೂ ಕೂಡ ಮುಂದುವರೆಸಿದ್ದೇವೆ. ಇದೀಗ ನಮ್ಮ ಗುರಿ ಸೆಮಿಫೈನಲ್ ಮೇಲಿದ್ದು, ಮತ್ತಷ್ಟು ಶ್ರಮ ವಹಿಸಿ ಮುಂದಿನ ಪಂದ್ಯಗಳಿಗೆ ಕಾರ್ಯತಂತ್ರ ರೂಪಿಸುತ್ತೇವೆ. ಸೆಮಿಫೈನಲ್ ಗೂ ಮುನ್ನ ನಾವು ಇನ್ನೂ ಒಂದು ಪಂದ್ಯವನ್ನಾಡಲಿದ್ದು, ನಿಜಕ್ಕೂ ಇದು ನಮ್ಮ ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳಲು ಅವಕಾಶ ನೀಡಿದಂತಾಗಿದೆ. ಬೌಲಿಂಗ್ ನಲ್ಲಿ ಹಾರ್ದಿಕ್ ಪಾಂಡ್ಯಾ ಕಮ್ ಬ್ಯಾಕ್ ತಂಡಕ್ಕೆ ಮತ್ತಷ್ಟು ಬಲ ತಂದಿದೆ. ಬೌಲಿಂಗ್ ಮಾಡುವಾಗ ಹಾರ್ದಿಕ್ ಓರ್ವ ಬ್ಯಾಟ್ಸಮನ್ ರೀತಿ ಯೋಚಿಸುತ್ತಾನೆ. ಇದು ಆತನಿಗೆ ಮತ್ತು ತಂಡಕ್ಕೆ ತುಂಬಾ ನೆರವಾಗಿದೆ. ಬ್ಯಾಟ್ಸ್ ಮನ್ ಗಳ ದೈಹಿಕ ಭಾಷೆ ಅಥವಾ ಆಂಗಿಕ ಚಲನೆಯನ್ನು ಗಮನಿಸಿ ಬೌಲಿಂಗ್ ಮಾಡುತ್ತಾರೆ. ಇದು ಅವರ ಯಶಸ್ಸಿಗೆ ಕಾರಣವಾಗಿದೆ ಎಂದು ಕೊಹ್ಲಿ ಹೇಳಿದ್ದಾರೆ.