ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಇಂದು ನಡೆದ ತಮ್ಮ ಅಂತಿಮ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 94 ರನ್ ಗಳ ಅಂತರದ ಭರ್ಜರಿ ಜಯ ಸಾಧಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸರ್ಫರಾಜ್ ಅಹ್ಮದ್, 'ಇಡೀ ಟೂರ್ನಿಯಲ್ಲಿ ನಾವು ಉತ್ತಮ ತಂಡವಾಗಿದ್ದೆವು. ಆರಂಭದಿಂದಲೂ ಉತ್ತಮ ಕ್ರಿಕೆಟ್ ಆಡಿದ ನಮಗೆ ತಂಡದಲ್ಲಿ ಕೆಲ ಸಂಯೋಜನೆಗಳು ಕೈ ಕೊಟ್ಟವು. ಆದರೆ ತಂಡಕ್ಕೆ ಶಾಹೀನ್ ಶಾ ಮತ್ತು ಹ್ಯಾರಿಸ್ ಸೊಹೆಲ್ ಆಗಮನದ ಬಳಿಕ ತಂಡದ ಸಮತೋಲನ ಸರಿ ಹೋಯಿತು.