ಶನಿವಾರ ಐಸಿಸಿ ವಿಶ್ವಕಪ್ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಭಾರತದ ವಿರುದ್ಧ ಏಳು ವಿಕೆಟ್ಗಳಿಂದ ಸೋಲು ಅನುಭವಿಸಿದ ಬಳಿಕ ಮಾತನಾಡಿದ ಅವರು, "ಪ್ರತಿಬಾರಿಯೂ ರೋಹಿತ್ ಶರ್ಮಾ ಉತ್ತಮ ರನ್ ಗಳಿಸುವ ಮೂಲಕ ಉತ್ತಮ ಆರಂಭ ಪಡೆಯುತ್ತಾರೆ. ಆ ರೀತಿ ನಮ್ಮ ಆಟಗಾರರು ಆಗಬೇಕು. ಅವರೊಬ್ಬ ಭಯವಿಲ್ಲದ ಆಟಗಾರ. ಶತಕ ಗಳಿಸುವುದು ಅವರಿಗೆ ಚೆನ್ನಾಗಿ ತಿಳಿದಿದೆ. ಒಮ್ಮೆ ಅವರು ಜವಾಬ್ದಾರಿ ತೆಗೆದುಕೊಂಡರೆ ಯಾವ ಬೌಲರ್ಗೆ ಗೌರವ ನೀಡಬೇಕೆಂಬುದನ್ನು ಅರಿತು ಅತ್ಯುತ್ತಮ ಬ್ಯಾಟಿಂಗ್ ಮಾಡುತ್ತಾರೆ ಎಂದರು.