'ಬಿಟ್ಸ್ ಅಂಡ್ ಪೀಸಸ್': ಜಡೇಜಾ ಕುರಿತ ನನ್ನ ಎಲ್ಲ ಭಾವನೆ ಬದಲಾಗಿದೆ: ಸಂಜಯ್ ಮಂಜ್ರೇಕರ್

ಸುಖಾ ಸುಮ್ಮನೆ ಟೀಕೆ ಮಾಡಿ ಸಂಕಷ್ಟಕ್ಕೆ ಸಿಲುಕಬೇಡಿ ಎಂದು.. ಇದಕ್ಕೆ ಸ್ಪಷ್ಟ ಉದಾಹರಣೆ ಭಾರತ ಮಾಜಿ ಕ್ರಿಕೆಟಿಗ ಮತ್ತು ಹಾಲಿ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್..
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ಇದಕ್ಕೇ ಹೇಳೋದು ಯಾವುದೇ ವ್ಯಕ್ತಿಯನ್ನು ಟೀಕೆ ಮಾಡುವ ಮುನ್ನ ನೂರು ಬಾರಿ ಯೋಚಿಸಿ.. ಸುಖಾ ಸುಮ್ಮನೆ ಟೀಕೆ ಮಾಡಿ ಸಂಕಷ್ಟಕ್ಕೆ ಸಿಲುಕಬೇಡಿ ಎಂದು.. ಇದಕ್ಕೆ ಸ್ಪಷ್ಟ ಉದಾಹರಣೆ ಭಾರತ ಮಾಜಿ ಕ್ರಿಕೆಟಿಗ ಮತ್ತು ಹಾಲಿ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್..
ಈ ಹಿಂದೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಂಜಯ್ ಮಂಜ್ರೇಕರ್, ಜಡೇಜಾರಂತಹ ಸಣ್ಣಪುಟ್ಟ ಆಟಗಾರರಿಗೆ ನಾನು ಅಭಿಮಾನಿಯಲ್ಲ ಎಂದು ಟೀಕಿಸಿದ್ದರು. ಇದು ವ್ಯಾಪಕ ವೈರಲ್ ಕೂಡ ಆಗಿತ್ತು. ಇದಕ್ಕೆ ಜಡೇಜಾ ಕೂಡ ತಮ್ಮದೇ ಆದ ಶೈಲಿಯಲ್ಲಿ ತಿರುಗೇಟು ನೀಡಿ, ವ್ಯಕ್ತಿಯ ಸಾಧನೆಗೆ ಗೌರವ ನೀಡಿ ಮಾತನಾಡುವುದನ್ನು ಕಲಿಯಿಯಿರಿ.. ನೀವು ಆಡಿರುವ ಪಂದ್ಯಗಳ ದುಪ್ಪಟ್ಟು ಸಂಖ್ಯೆಯ ಪಂದ್ಯಗಳನ್ನು ನಾನು ಆಡಿದ್ದೇನೆ ಎಂದು ತಿರುಗೇಟು ನೀಡಿದ್ದರು. 
ಈ ಕುರಿತಂತೆ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಕೂಡ ಸಂಜಯ್ ಮಂಜ್ರೇಕರ್ ಅವರ ಕಾಲೆಳೆಯುತ್ತಿದ್ದು, ಇದೇ ಕಾರಣಕ್ಕೆ ಸಂಜಯ್ ಅವರನ್ನು ಟ್ವಿಟರ್ ನಲ್ಲಿ ಬ್ಲಾಕ್ ಮಾಡಿದ್ದರು. ಆ ಮೂಲಕ ಜಡೇಜಾ ಕುರಿತಂತೆ ಹೇಳಿಕೆ ನೀಡಿ ಅಕ್ಷರಶಃ ಟ್ರೋಲ್ ಗೆ ತುತ್ತಾಗಿದ್ದರು. ಇದೀಗ ತಾವೇ ಆರಂಭಿಸಿದ್ದ ಟೀಕೆಗಳಿಗೆ ಕೊನೆಗೂ ಸಂಜಯ್ ಫುಲ್ ಸ್ಟಾಪ್ ಹಾಕುವ ಪ್ರಯತ್ನ ಮಾಡಿದ್ದು, ಜಡೇಜಾ ಕುರಿತ ನನ್ನ ಎಲ್ಲ ಭಾವನೆ ಬದಲಾಗಿದೆ ಎನ್ನುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ನಿನ್ನೆ ನ್ಯೂಜಿಲೆಂಡ್ ವಿರುದ್ಧದ ಮೊದಲ ಸೆಮಿ ಫೈನಲ್ ನಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಭಾರತ ತಂಡಕ್ಕೆ ನೆರವಾಗಿದ್ದ ರವೀಂದ್ರ ಜಡೇಜಾ ಅಮೋಘ ಬ್ಯಾಟಿಂಗ್ ಮೂಲಕ 77ರನ್ ಗಳಿಸಿ ಭಾರತ ನ್ಯೂಜಿಲೆಂಡ್ ಗೆ ಹೋರಾಟ ನೀಡುವಂತೆ ನೋಡಿಕೊಂಡರು. ಅವರ ಅದ್ಭುತ ಇನ್ನಿಂಗ್ಸ್ ಕಾರಣದಿಂದಾಗಿಯೇ ಭಾರತ ಹೀನಾಯವಾಗಿ ಸೋಲಬೇಕಿದ್ದ ಪಂದ್ಯದಲ್ಲಿ ವಿರೋಚಿತ ಸೋಲು ಕಂಡಿತು. ಇದೇ ಕಾರಣಕ್ಕೆ ಸಂಜಯ್ ಜಡೇಜಾ ಕುರಿತ ತಮ್ಮ ಅಭಿಪ್ರಾಯವನ್ನು ಬದಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com