ನವದೆಹಲಿ: ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ ಗಾಯಗೊಂಡು ವಿಶ್ವಕಪ್ ಟೂರ್ನಿಯಿಂದ ಹೊರಗುಳಿದ್ದಿದ್ದರು. ಇದೀಗ ಮತ್ತೊಮ್ಮೆ ವಿಭಿನ್ನ ಕಾರಣಕ್ಕೆ ಧವನ್ ಬ್ಯಾಟ್ ಹಿಡಿದಿದ್ದಾರೆ.
ಸದ್ಯ ದೇಶಾದ್ಯಂತ ಬಾಟಲ್ ಕ್ಯಾಪ್ ಚಾಲೆಂಜ್ ನಡೆಯುತ್ತಿದೆ. ನಟ-ನಟಿಯರು ಸೇರಿದಂತೆ ಹಲವರು ಬಾಟಲ್ ಕ್ಯಾಪ್ ಚಾಲೆಂಜ್ ಮಾಡಿ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇದೀಗ ಇದೇ ಚಾಲೆಂಜ್ ಅನ್ನು ಧವನ್ ಬ್ಯಾಟ್ ಬೀಸುವ ಮೂಲಕ ಮಾಡಿದ್ದಾರೆ.
ಈ ಚಾಲೆಂಜ್ ಅನ್ನು ಯಶಸ್ವಿಗೊಳಿಸಿರುವ ಧವನ್ ಈ ಚಾಲೆಂಜ್ ತೆಗೆದುಕೊಳ್ಳುವಂತೆ ಯುವರಾಜ್ ಸಿಂಗ್, ಬ್ರಿಯಾನ್ ಲಾರಾ, ಕ್ರಿಸ್ ಗೇಯ್ಲ್ ಮತ್ತು ಸಚಿನ್ ತೆಂಡೂಲ್ಕರ್ ಸವಾಲು ಹಾಕಿದ್ದಾರೆ.
Yuvi Paaji, here is my #BottleCapChallenge! This is the first time I am picking my bat up after my injury..feels good to be back!