ಇಂಗ್ಲೆಂಡ್ ನಲ್ಲಿ ಮುಕ್ತಾಯವಾದ ಐಸಿಸಿ ವಿಶ್ವಕಪ್ ನಲ್ಲಿ ಭಾರತ ತಂಡ ಸೆಮಿಫೈನಲ್ ನಲ್ಲಿ ಹೊರ ಬಿದ್ದ ಬಳಿಕ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ್ದ ಮಹೇಂದ್ರ ಸಿಂಗ್ ಧೋನಿ ಅವರ ನಿವೃತ್ತಿ ಬಗ್ಗೆ ಹಲವರು ಪ್ರಸ್ತಾಪ ಮಾಡಿದ್ದರು. ಹಾಗಾಗಿ, ಭಾರತದ ಮಾಜಿ ಆಟಗಾರ ಮತ್ತು ಹಾಲಿ ಸಂಸದ ಅವರದೇ ದಾಟಿಯಲ್ಲಿ ಧೋನಿ ರಾಜೀನಾಮೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದು, ಭಾವನಾತ್ಮಕವಾಗಿ ಯೋಚಿಸದೇ, ಧೋನಿ ನಿವೃತ್ತಿ ನಿರ್ಧಾರ ಪ್ರಾಯೋಗಿಕವಾಗಿರಲಿ ಎಂದು ಹೇಳಿದ್ದಾರೆ.