ವಿಂಡೀಸ್ ಪ್ರವಾಸ: ತಂಡದಲ್ಲಿ ಸ್ಥಾನ ಸಿಗದಕ್ಕೆ ಶುಭ್ ಮನ್ ಗಿಲ್ ಬೇಸರ

ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ತಂಡದಲ್ಲಿ ಸ್ಥಾನ ಲಭಿಸದರಿವುದರಿಂದ ನಿರಾಸೆ ಆಗಿದೆ ಎಂದು ಯುವ ಆಟಗಾರ ಶುಭ್ ಮನ್ ಗಿಲ್ ತಿಳಿಸಿದ್ದಾರೆ.
ಶುಭ್ ಮನ್ ಗಿಲ್
ಶುಭ್ ಮನ್ ಗಿಲ್
ನವದೆಹಲಿ: ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ತಂಡದಲ್ಲಿ ಸ್ಥಾನ ಲಭಿಸದರಿವುದರಿಂದ ನಿರಾಸೆ ಆಗಿದೆ ಎಂದು ಯುವ ಆಟಗಾರ ಶುಭ್ ಮನ್ ಗಿಲ್ ತಿಳಿಸಿದ್ದಾರೆ. 
ಐಸಿಸಿ ವಿಶ್ವಕಪ್ ನಲ್ಲಿ ಭಾರತ ತಂಡದ ಸೆಮಿಫೈನಲ್ಸ್ ನಲ್ಲಿ ಸೋತ ಬಳಿಕ ಯುವ ಆಟಗಾರರಿಗೆ ಮಣೆ ಹಾಕುವ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ವಿಂಡೀಸ್ ವಿರುದ್ಧದ ಸರಣಿಗೆ ಮನೀಷ್ ಪಾಂಡೆ ಹಾಗೂ ಶ್ರೇಯಸ್ ಅಯ್ಯರ್ ಅವರಿಗೆ ಸ್ಥಾನ ನೀಡಲಾಗಿದ್ದು, ಈ ಸ್ಟಾರ್ ಆಟಗಾರರು ವಿಂಡೀಸ್ ವಿರುದ್ಧ ಭಾರತ ‘ಎ’ ತಂಡದ ಪರ ಭರ್ಜರಿ ಪ್ರದರ್ಶನ ನೀಡಿದ್ದಾರೆ. 
ಯುವ ಆಟಗಾರ ವಿಂಡೀಸ್ ವಿರುದ್ಧದ ಟಿ-20 ಹಾಗೂ ಏಕದಿನ ಸರಣಿಗೆ ಶುಭ್ ಮನ್ ಗಿಲ್ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಗಿಲ್ ಅವರು ವಿಂಡೀಸ್ ವಿರುದ್ಧದ ಸರಣಿಯಲ್ಲಿ 218 ರನ್ ಬಾರಿಸಿದ್ದಾರೆ. 
‘ಭಾರತ ತಂಡದಲ್ಲಿ ಸ್ಥಾನ ಪಡೆಯಲು ಉತ್ಸುಕನಾಗಿದ್ದೇನೆ. ವಿಂಡೀಸ್ ಪ್ರವಾಸದಲ್ಲಿ ಭಾರತ ತಂಡದಲ್ಲಿ ಸ್ಥಾನ ಸಿಗುವ ಕನಸು ಕಂಡಿದ್ದೆ. ಯಾವುದಾದರೂ ಒಂದು ಮಾದರಿಯಲ್ಲಿ ತಂಡ ಸೇರುವ ಹಂಬಲವಿತ್ತು. ತಂಡದಲ್ಲಿ ಸ್ಥಾನ ಸಿಗದೇ ಇದ್ದಾಗ ನಿರಾಸೆ ಆಗಿದೆ. ಆದರೂ, ಧೃತಿಗೆಡದೆ ಅಭ್ಯಾಸ ನಡೆಸುವೆ ಎಂದಿದ್ದಾರೆ. 
‘ಯಾವುದೇ ಸ್ಥಾನ ಹಾಗೂ ವಾತಾವರಣಕ್ಕೆ ಹೊಂದಿಕೊಂಡು ಆಡಲು ತಯಾರಿ ನಡೆಸಬೇಕಿದೆ. ಉತ್ತಮ ಎಸೆತಗಳನ್ನು ಗೌರವಿಸುತ್ತಾ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ಕಾಲ ಕಳೆಯುವುದನ್ನು ಕಲಿಯಬೇಕಿದೆ. ಕಠಿಣ ಸಮಯದಲ್ಲಿ ಬ್ಯಾಟಿಂಗ್ ಮಾಡುವ ಸವಾಲನ್ನು ಮೆಟ್ಟಿ ನಿಲ್ಲುವ ಆಟ ಮೈಗೂಡಿಸಿಕೊಳ್ಳಬೇಕಿದೆ ಎಂದು ಗಿಲ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com