ದಕ್ಷಿಣ ಆಫ್ರಿಕಾ ಪಂದ್ಯಕ್ಕೂ ಮುನ್ನ ಸುದ್ದಿಗಾರರು ಮತ್ತು ಮಾಧ್ಯಮ ಸಿಬ್ಬಂದಿಗಳು ಟೀಂ ಇಂಡಿಯಾ ಆಟಗಾರರೊಂದಿಗೆ ಸಂವಾದ ನಡೆಸಬೇಕಿತ್ತು. ಹೀಗಾಗಿ ಸುದ್ಜಿಗೋಷ್ಠಿ ಆಯೋಜನೆಯಾಗಿತ್ತು. ಆದರೆ ಸುದ್ದಿಗೋಷ್ಠಿಗೆ ತಂಡದ ಪ್ರಮುಖ ಆಟಗಾರರು, ತಂಡದ ನಾಯಕ ಅಥವಾ ತಂಡದ ತರಬೇತು ದಾರರು ಹಾಜರಾಗಬೇಕಿತ್ತು. ಆದರೆ ತಂಡದ ನಿರ್ವಹಣಾ ಮಂಡಳಿ ಪ್ರಮುಖ ಆಟಗಾರರನ್ನಲ್ಲದೇ ತಂಡದ ಬೆಂಚ್ ಸ್ಟ್ರೆಂಥ್ ಆಟಗಾರರಾದ ಆವೇಶ್ ಖಾನ್, ದೀಪಕ್ ಚಹಾರ್ ಮತ್ತು ಖಲೀಲ್ ಅಹ್ಮದ್ ರನ್ನು ಸುದ್ದಿಗೋಷ್ಟಿಗೆ ಕಳುಹಿಸಿದೆ.