ಉತ್ತಮ ವಿದಾಯಕ್ಕೆ ಯುವಿ ಅರ್ಹರಾಗಿದ್ದರು: ರೋಹಿತ್ ಶರ್ಮಾ

ಭಾರತ ಕಂಡ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ಯುವರಾಜ್ ಸಿಂಗ್ ಉತ್ತಮ ವಿದಾಯಕ್ಕೆ ಯುವಿ ಅರ್ಹರಾಗಿದ್ದರು ಎಂದು ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಭಾರತ ಕಂಡ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ಯುವರಾಜ್ ಸಿಂಗ್ ಉತ್ತಮ ವಿದಾಯಕ್ಕೆ ಯುವಿ ಅರ್ಹರಾಗಿದ್ದರು ಎಂದು ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಹೇಳಿದ್ದಾರೆ.
ಅತ್ತ ಯುವರಾಜ್ ಸಿಂಗ್ ವಿದಾಯ ಘೋಷಣೆ ಮಾಡುತ್ತಿದ್ದಂತೆಯೇ ಇತ್ತ ಟ್ವೀಟ್ ಮಾಡಿರುವ ರೋಹಿತ್ ಶರ್ಮಾ, ನೀವು ಏನು ಸಂಪಾದಿಸಿದ್ದೀರೋ ಅದು ನಿಮಗೆ ತಿಳಿದಿಲ್ಲ. ಲವ್ ಯೂ ಸಹೋದರ.. ನಿಜಕ್ಕೂ ನೀವು ಉತ್ತಮ ವಿದಾಯದ ಪಂದ್ಯಕ್ಕೆ ಅರ್ಹರಾಗಿದ್ದಿರಿ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ರೋಹಿತ್ ಶರ್ಮಾ ಟ್ವೀಟ್ ಅನ್ನು ಯುವಿ ಕೂಡ ರಿಟ್ವೀಟ್ ಮಾಡುವ ಮೂಲಕ ಧನ್ಯವಾದ ಹೇಳಿದ್ದಾರೆ. 
ಅಂತೆಯೇ ಮತ್ತೋರ್ವ ಆಟಗಾರ ಶಿಖರ್ ಧವನ್ ಕೂಡ ಯುವಿ ವಿದಾಯಕ್ಕೆ ಭಾವನಾತ್ಮಕ ಸಂದೇಶ ಕಳುಹಿಸಿದ್ದು, ನಿಮ್ಮ ಅತ್ಯದ್ಭುತ ಸಲಹೆಗಳಿಗೆ ಥಾಂಕ್ಯೂ ಯುವಿ ಪಾಜೀ... ನಿಮ್ಮ ಬೆಂಬಲ, ಪ್ರೀತಿಗೆ ನಾನು ಅಭಾರಿ... ನೀವು ವಿಶ್ವ ಕಂಡ ಅತ್ಯುತ್ತಮ ಎಡಗೈ ಬ್ಯಾಟ್ಸ್ ಮನ್ ಗಳಲ್ಲಿ ಒಬ್ಬರು. ನಾನು ನಿಮ್ಮ ಶೈಲಿಯನ್ನು ಮತ್ತು ಬ್ಯಾಟಿಂಗ್ ತಂತ್ರಗಾರಿಕೆಯನ್ನು ಗಮನಿಸುತ್ತಿದ್ದೆ. ಸಾಕಷ್ಚು ವಿಚಾರಗಳನ್ನು ಕಲಿತಿದ್ದೇನೆ, ನಿಮ್ಮ 2ನೇ ಇನ್ನಿಂಗ್ಸ್ ಶುಭಕರವಾಗಿರಲಿ ಎಂದು ಧವನ್ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com