ನಿನ್ನೆ ನ್ಯೂಜಿಲೆಂಡ್ ವಿರುದ್ಧ ಪಂದ್ಯ ಟಾಸ್ ಕೂಡ ಕಾಣದೇ ಮಳೆಗೆ ಆಹುತಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿರಾಟ್ ಕೊಹ್ಲಿ, ಶಿಖರ್ ಧವನ್ ಕುರಿತಂತೆ ಮಾಹಿತಿ ನೀಡಿದರು. ಶಿಖರ್ ಧವನ್ ಇನ್ನೂ ಕೆಲ ವಾರಗಳ ಕಾಲ ಪ್ಲಾಸ್ಟರ್ ಹಾಕಿಕೊಂಡೇ ಇರಬೇಕಾಗುತ್ತದೆ. ಆದರೆ ಸಮಾಧಾನದ ವಿಚಾರವೆಂದರೆ ಆತ ಶೀಘ್ರ ಗುಣಮುಖನಾಗಲಿದ್ದು, ಟೂರ್ನಿಯ ಮಧ್ಯ ಭಾಗದಲ್ಲಿ ತಂಡ ಸೇರಿಕೊಳ್ಳಬಹುದು ಎಂದು ಹೇಳಿದ್ದಾರೆ.