ಈ ವೇಳೆ ವಿರಾಟ್ ಕೊಹ್ಲಿ ಔಟ್ ಎಂದು ತಾವೇ ಕ್ರಿಸ್ ಬಿಟ್ಟಿದ್ದರಿಂದ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಕೊಹ್ಲಿಯ ವರ್ತನೆಯಿಂದ ಭಾರೀ ಬೆಲೆ ತೆರಬೇಕಾಯಿತು. ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಕೊಹ್ಲಿ ಪೆವಿಲಿಯನ್ ಸೇರಿದ ನಂತರ ಬಂದ ಕೇದಾರ್ ಜಾದವ್ ಮತ್ತು ವಿಜಯ್ ಶಂಕರ್ ಯಾವುದೇ ಭರ್ಜರಿ ಹೊಡೆತಕ್ಕೆ ಮುಂದಾಗದಿದ್ದದ್ದು ತಂಡಕ್ಕೆ ಸ್ವಲ್ಪ ಹಿನ್ನಡೆಯಾಯಿತು.