ಕೊಹ್ಲಿ ಜೊತೆ 'ಕಿರಿಕ್': ಕೋಪದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಾಗಿಲು ಮುರಿದ ಅಂಪೈರ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಮತ್ತು ಸನ್ ರೈಸರ್ಸ್ ಹೈದರಾಬಾದ್ ವಿರುದ್ದದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜೊತೆ ಅಂಪೈರ್ ನಿಗೆಲ್ ಲಾಂಗ್ ಕಿರಿಕ್ ಮಾಡಿದ್ದು ಸುದ್ದಿಯಾಗಿತ್ತು.
ವಿರಾಟ್ ಕೊಹ್ಲಿ, ನಿಗೆಲ್ ಲಾಂಗ್
ವಿರಾಟ್ ಕೊಹ್ಲಿ, ನಿಗೆಲ್ ಲಾಂಗ್
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಮತ್ತು ಸನ್ ರೈಸರ್ಸ್ ಹೈದರಾಬಾದ್ ವಿರುದ್ದದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜೊತೆ ಅಂಪೈರ್ ನಿಗೆಲ್ ಲಾಂಗ್ ಕಿರಿಕ್ ಮಾಡಿದ್ದು ಸುದ್ದಿಯಾಗಿತ್ತು. ಆದರೆ ಇದೀಗ ನಿಗೆಲ್ ಅವರು ಚಿನ್ನಸ್ವಾಮಿ ಕ್ರೀಡಾಂಗಣದ ಅಂಪೈರ್ ರೂಂನ ಬಾಗಿಲನ್ನೇ ಮುರಿದು ಹಾಕಿದ್ದಾರೆ.
ಪಂದ್ಯದ ಮಧ್ಯೆ ಅಂಪೈರ್ ನೀಡಿದ ತಪ್ಪು ತೀರ್ಪಿನ ಕುರಿತು ವೇಗಿ ಉಮೇಶ್ ಯಾದವ್ ಮತ್ತು ವಿರಾಟ್ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಾರಿಯ ಐಪಿಎಲ್ ಪಂದ್ಯಗಳಲ್ಲಿ ಅಂಪೈರ್ ಜೊತೆಗೆ ತಂಡಗಳು ಅಷ್ಟೇನು ಉತ್ತಮ ಬಾಂಧ್ಯವ ಹೊಂದರಿಲಿಲ್ಲ. 
ಶನಿವಾರ ಪಂದ್ಯ ಮುಗಿಯುತ್ತಲೇ ಸ್ಟೇಡಿಯಂನ ಅಂಪೈರ್ ರೂಮಿಗೆ ತೆರಳಿದ ಅಂಪೈರ್ ನಿಗೆಲ್ ಲಾಂಗ್ ಬಾಗಿಲನ್ನು ಒದ್ದು ಮುರಿದು ಹಾಕಿದ್ದಾರೆ. ಅಂಪೈರ್ ದುರ್ವರ್ತನೆ ಕುರಿತು ಕೆಎಸ್ಪಿಎ ಅಧಿಕಾರಿಗಳು ನಿಗೆಲ್ ಗೆ ಅಶಿಸ್ತಿನ ವರ್ತನೆ ಕುರಿತು ತಿಳಿಸಿದ್ದಾರೆ. ಅಲ್ಲದೇ ಅವರಿಗೆ 5000 ದಂಡವನ್ನು ವಿಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com