ಈ ಕುರಿತು ಪ್ರತಿಕ್ರಿಯೆ ನೀಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೆಂಟರ್ ದಾದಾ, " ವಿಶ್ವಕಪ್ ವೇಳೆ ಭಾರತ ತಂಡಕ್ಕೆ ಪಂತ್ ಅವರ ಕೊರತೆ ಕಾಡಲಿದೆ". ಇದೇ ವೇಳೆ ಗಾಯಾಳು ಕೇದಾರ್ ಜಾಧವ್ ಅವರ ಸ್ಥಾನದಲ್ಲಿ ಪಂತ್ ಅವರನ್ನು ತಂಡಕ್ಕೆ ಸೇರಿಸಬಹುದಲ್ಲವೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು "ಈ ರೀತಿ ಹೇಳುವುದು ಸರಿಯಲ್ಲ. ಕೇದಾರ್ ಬಹು ಬೇಗನೆ ಚೇತರಿಸಲಿ ಎಂದು ಆಶಿಸುತ್ತೇನೆ. ಆದರೂ ತಂಡಕ್ಕೆ ಪಂತ್ ಅವರ ಕೊರತೆ ಕಾಡಲಿದೆ,'' ಎಂದರು.