ಕೇದಾರ್ ಜಾಧವ್ ಬದಲಿಗೆ ಬದಲಿ ಆಟಗಾರನನ್ನು ಬಿಸಿಸಿಐ ಗುರುತಿಸಿರಲಿಲ್ಲ. ನಿಗದಿತ ಸಮಯದಲ್ಲಿ ಕೇದಾರ್ ಜಾಧವ್ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಒಂದು ವೇಳೆ ಜಾಧವ್ ಚೇತರಿಕೆ ಕಾಣದೆ ವಿಫಲವಾಗಿದ್ದೇ ಆದಲ್ಲಿ ಸ್ಟಾಂಡ್ ಬೈನಲ್ಲಿರುವ ರಿಷಭ್ ಪಂತ್, ಅಂಬಾಟಿ ರಾಯುಡು, ಇಶಾಂತ್ ಶರ್ಮಾ, ಅಕ್ಷರ್ ಪಟೇಲ್ ಹಾಗೂ ನವದೀಪ್ ಸೈನಿ ಅವರಲ್ಲಿ ಒಬ್ಬರನ್ನು ಆರಿಸಲಾಗುತ್ತಿತ್ತು.