ಧೋನಿ ಸ್ಥಾನ ತುಂಬಲು ಸಾಧ್ಯವಿಲ್ಲ: 'ಪಂತ್' ರನ್ನು ಟ್ರೋಲ್ ಮಾಡಿದ ಅಭಿಮಾನಿಗಳು!

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಬಾಂಗ್ಲಾ ದೇಶ ವಿರುದ್ಧದ ಮೊದಲ ಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ  ಟೀಂ ಇಂಡಿಯಾ ಸೋತ ಬಳಿಕ ಭಾರತದ ಅಭಿಮಾನಿಗಳು ವಿಕೆಟ್ ಕೀಪರ್ ರಿಷಬ್ ಪಂತ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದಾರೆ.
ರಿಷಬ್ ಪಂತ್
ರಿಷಬ್ ಪಂತ್

ನವದೆಹಲಿ:  ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಬಾಂಗ್ಲಾ ದೇಶ ವಿರುದ್ಧದ ಮೊದಲ ಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ  ಟೀಂ ಇಂಡಿಯಾ ಸೋತ ಬಳಿಕ ಭಾರತದ ಅಭಿಮಾನಿಗಳು ವಿಕೆಟ್ ಕೀಪರ್ ರಿಷಬ್ ಪಂತ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದಾರೆ.

ಒಂದೇ ಓವರ್ ನಲ್ಲಿ ಮೂರು ಪ್ರಮಾದಗಳನ್ನು ಎಸಗಿ ತಂಡದ ಸೋಲಿಗೆ ಪಂತ್ ಕಾರಣರಾದರೂ  ಎಂದು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯಜುವೇಂದ್ರ ಚಾಹಲ್ ಅವರ ಒವರ್ ನಲ್ಲಿ ಎರಡು ಬಾರಿ ಎಲ್ ಬಿಡಬ್ಲ್ಯೂಗಾಗಿ ಡಿಆರ್ ಎಸ್ ಮನವಿ ಪಡೆಯುವ ಅವಕಾಶವಿದ್ದರೂ ರಿಷಭ್ ಪಂತ್ ಅದನ್ನು ಪಡೆಯಲಿಲ್ಲ. ಅದೇ ಓವರ್ ನ ಅಂತಿಮ ಎಸೆತದಲ್ಲಿ ಬಾಲ್ ಬ್ಯಾಟಿಗೆ ತಾಗದಿದ್ದರೂ ಮನವಿ ಮಾಡುವ ಮೂಲಕ ಮಹತ್ವದ ಡಿಆರ್ ಎಸ್ ಕಳೆದುಕೊಂಡಿತು. 

ಧೋನಿ ಅವರ ಉಪಸ್ಥಿತಿ ಎಷ್ಟು ಅಗತ್ಯವಿದೆ ಎಂಬುದು ಇದರಿಂದಲೇ ತಿಳಿಯುತ್ತಿದೆ. ವಿಕೆಟ್ ಹಿಂದೆ ನಿಂತು ಚಾಕಚಕ್ಯತೆ ಪ್ರದರ್ಶಿಸುವ  ಧೋನಿ ಸ್ಥಾನವನ್ನು ತುಂಬಲು ಪಂತ್ ಗೆ ಸಾಧ್ಯವಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಟೀಕಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com