ಹೈದರಾಬಾದ್: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಆಯ್ಕೆ ಸಮಿತಿಯನ್ನು ಬದಲಾಯಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಮಾಜಿ ಸ್ಪಿನ್ ಮಾಂತ್ರಿಕಾ ಹರ್ಭಜನ್ ಸಿಂಗ್ ಹೇಳಿದ್ದಾರೆ.
ಉದಯೋನ್ಮುಖ ಯುವ ಆಟಗಾರ ಸಂಜು ಸ್ಯಾಮ್ಸನ್ ಅವರನ್ನು ವಿಂಡೀಸ್ ಸರಣಿಗೆ ಆಯ್ಕೆ ಮಾಡದಿರುವುದಕ್ಕೆ ಈ ಹಿಂದೆ ಸಂಸದ ಶಶಿ ತರೂರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಹರ್ಭಜನ್ ಸಿಂಗ್ ಸಹ ತರೂರ್ ಮಾತಿಗೆ ದನಿಗೂಡಿಸಿದ್ದಾರೆ.
ಆಯ್ಕೆ ಸಮಿತಿ ಸ್ಯಾಮ್ಸನ್ ಹೃದಯವನ್ನು ಪರೀಕ್ಷಿಸುತ್ತಿದೆ. ಸಮಿತಿ ಸಂಪೂರ್ಣವಾಗಿ ಬದಲಾಗಬೇಕು. ಬಲಿಷ್ಠರ ಆಗಮನವಾಗಬೇಕು. ಈ ಬಗ್ಗೆ ಸೌರವ್ ಗಂಗೂಲಿ ಕಾರ್ಯೋನ್ಮುಖರಾಗುತ್ತಾರೆ ಅನ್ನುವ ಭರವಸೆ ಇದೆ ಎಂದು ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ವೆಸ್ಟ್ ಇಂಡೀಸ್ ಸರಣಿಗೆ ಟೀಂ ಇಂಡಿಯಾ ಪ್ರಕಟವಾಗುತ್ತಿದ್ದಂತೆ ಸ್ಯಾಮ್ಸನ್ ಪರ ಭಾರೀ ಬೆಂಬಲ ವ್ಯಕ್ತವಾಗಿತ್ತು. ಸತತ ವೈಫಲ್ಯ ಅನುಭವಿಸಿದರೂ ರಿಷಬ್ ಪಂತ್ ಆಯ್ಕೆ ಮಾಡಿದ್ದು ನೆಟಿಗರ ವಿರೋಧಕ್ಕೆ ಕಾರಣವಾಗಿತ್ತು.
Advertisement