ಬೆಂಗಳೂರು: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಾಜಿ ನಾಯಕ ಸೌರವ್ ಗಂಗೂಲಿ, ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ್ದರು.
ಬುಧವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭೇಟಿ ಕೊಟ್ಟಿದ್ದ ಗಂಗೂಲಿ, ಎನ್ಸಿಎ ಮುಖ್ಯಸ್ಥ ಹಾಗೂ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರನ್ನು ಭೇಟಿ ಮಾಡಿ ದ್ದರು. ಈ ವೇಳೆಯಲ್ಲಿ ರಾಷ್ಟೀಯ ಕ್ರಿಕೆಟ್ ಅಕಾಡೆಮಿ ಉನ್ನತಿಗಾಗಿ ಮಹತ್ವದ ಚರ್ಚೆ ನಡೆಸಿದ್ದರು.
ಬೆಂಗಳೂರು ವಿಮಾನ ನಿಲ್ಡಾಣಕ್ಕೆ ಬಂದಿಳಿದ ಸೌರವ್ ಗಂಗೂಲಿಗೆ ಅಭಿಮಾನಿಗಳು ಹೃತ್ಪೂರ್ವಕ ಸ್ವಾಗತವನ್ನು ಕೋರಿದ್ದರು. ಗಂಗೂಲಿ ಎಲ್ಲೇ ತೆರಳಿದರೂ ಜನರು ಜೈಕಾರ ಕೂಗುವ ಮೂಲಕ ಚಾಂಪಿಯನ್ ಆಟಗಾರನಿಗೆ ತಮ್ಮ ಪ್ರೀತಿಯನ್ನು ತೋರಿಸಿದ್ದರು.
Advertisement