ಪಾಕ್ ಪ್ರವಾಸಕ್ಕೆ ಲಂಕಾ ಆಟಗಾರರ ಹಿಂದೇಟಿನ ಹಿಂದೆ ಭಾರತವಿಲ್ಲ: ಪಾಕ್ ಕಿವಿಹಿಂಡಿದ ಲಂಕಾ

ಭಾರತದ ಬೆದರಿಕೆಯಿಂದಾಗಿ ಪಾಕ್ ಪ್ರವಾಸಕ್ಕೆ ಶ್ರೀಲಂಕಾ ಆಟಗಾರರು ಹಿಂದೇಟು ಹಾಕಿದ್ದಾರೆ ಎಂದು ಪಾಕ್ ಸಚಿವನ ಗಂಭೀರ ಆರೋಪಕ್ಕೆ ಶ್ರೀಲಂಕಾ ತಿರುಗೇಟು ನೀಡಿದೆ.
ಲಂಕಾ ಆಟಗಾರರು-ಫವಾದ್
ಲಂಕಾ ಆಟಗಾರರು-ಫವಾದ್

ನವದೆಹಲಿ: ಭಾರತದ ಬೆದರಿಕೆಯಿಂದಾಗಿ ಪಾಕ್ ಪ್ರವಾಸಕ್ಕೆ ಶ್ರೀಲಂಕಾ ಆಟಗಾರರು ಹಿಂದೇಟು ಹಾಕಿದ್ದಾರೆ ಎಂದು ಪಾಕ್ ಸಚಿವನ ಗಂಭೀರ ಆರೋಪಕ್ಕೆ ಶ್ರೀಲಂಕಾ ತಿರುಗೇಟು ನೀಡಿದೆ.

ಪಾಕಿಸ್ತಾನದ ವಿಜ್ಞಾನ ಸಚಿವ ಫವಾದ್ ಹುಸೇನ್ ಈ ರೀತಿ ಗಂಭೀರ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಶ್ರೀಲಂಕಾ ನಮ್ಮ ತಂಡದ ಆಟಗಾರರಿಗೆ ಯಾರು ಬೆದರಿಕೆ ಹಾಕಿಲ್ಲ. ಅಲ್ಲದೆ ಭಾರತದ ಬೆದರಿಕೆಯಿಂದಾಗಿ ನಮ್ಮ ಆಟಗಾರರು ಪಾಕ್ ಪ್ರವಾಸ ಕೈಗೊಂಡಿಲ್ಲ ಎಂಬುದು ಹಸಿ ಸುಳ್ಳು ಎಂದು ಹೇಳಿದೆ. 

2009ರ ಉಗ್ರ ದಾಳಿಯಿಂದಾಗಿ ನಮ್ಮ ತಂಡದ ಆಟಗಾರರು ಪಾಕಿಸ್ತಾನಕ್ಕೆ ತೆರಳಲು ಹಿಂದೇಟು ಹಾಕಿದ್ದಾರೆ ಅಷ್ಟೇ. ಇನ್ನು ಪಾಕಿಸ್ತಾನ ನೆಲದಲ್ಲಿ ಪಾಕ್ ಆಟಗಾರರ ಟೊಂಕ ಮುರಿಯಲು ಧೈರ್ಯ ಮಾಡಿರುವ ಆಟಗಾರರನ್ನು ನಾವು ಆಯ್ಕೆ ಮಾಡಿದ್ದೇವೆ ಎಂದು ಹರೀನ್ ಫರ್ನಾಂಡೋ ಟ್ವೀಟ್ ಮೂಲಕ ತಿಳಿಸಿದ್ದಾರೆ. 

2009ರಲ್ಲಿ ಶ್ರೀಲಂಕಾ ತಂಡದ ಆಟಗಾರರು ಸರಣಿ ಸಂಬಂಧ ಪಾಕಿಸ್ತಾನಕ್ಕೆ ತೆರಳಿದ್ದಾಗ ಆಟಗಾರರಿದ್ದ ಬಸ್ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಆಟಗಾರರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ. ಆದರೆ ದಾಳಿಯಲ್ಲಿ 8 ಮಂದಿ ಸ್ಥಳೀಯರು ಮೃತಪಟ್ಟಿದ್ದರು ಹಲವು ಗಂಭೀರವಾಗಿ ಗಾಯಗೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com