ಸಂಜು ಸ್ಯಾಮ್ಸನ್ ಇದ್ದಾನೆ ಹುಷಾರ್: ರಿಷಬ್ ಪಂತ್‌ಗೆ ಎಚ್ಚರಿಕೆ ನೀಡಿದ ಗಂಭೀರ್

ನಿನ್ನ ಹಿಂದೆನೇ ಸಂಜು ಸ್ಯಾಮನ್ಸ್ ಇದ್ದಾನೆ ಹುಷಾರ್ ಆಗಿರು ಎಂದು ಟೀಂ ಇಂಡಿಯಾದ ಯುವ ಕ್ರಿಕೆಟಿಗ ರಿಷಬ್ ಪಂತ್ ಗೆ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಗಂಭೀರವಾಗಿ ವಾರ್ನ್ ಮಾಡಿದ್ದಾರೆ.
ರಿಷಬ್ ಪಂತ್-ಗೌತಮ್ ಗಂಭೀರ್
ರಿಷಬ್ ಪಂತ್-ಗೌತಮ್ ಗಂಭೀರ್

ನವದೆಹಲಿ: ನಿನ್ನ ಹಿಂದೆನೇ ಸಂಜು ಸ್ಯಾಮನ್ಸ್ ಇದ್ದಾನೆ ಹುಷಾರ್ ಆಗಿರು ಎಂದು ಟೀಂ ಇಂಡಿಯಾದ ಯುವ ಕ್ರಿಕೆಟಿಗ ರಿಷಬ್ ಪಂತ್ ಗೆ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಗಂಭೀರವಾಗಿ ವಾರ್ನ್ ಮಾಡಿದ್ದಾರೆ.

ಸತತ ಅವಕಾಶಗಳು ಸಿಗುತ್ತಿದೆ ಅಂತ ಮೈ ಮರಿಬೇಡ. ನಿನ್ನ ಪ್ರದರ್ಶನವನ್ನು ನೋಡಿಕೊಳ್ಳುವುದು ಉತ್ತಮ. ನಿಮ್ಮ ಸಾಮರ್ಥ್ಯದ ಬಗ್ಗೆ ನನಗೆ ಸಂದೇಹವಿಲ್ಲ. ಆದರೆ ತಂಡದಲ್ಲಿ ಸ್ಥಾನ ಪಡೆಯಲು ಮತ್ತೊಬ್ಬ ಯುವ ಆಟಗಾರ ಸಂಜು ಸ್ಯಾಮ್ಸನ್ ಸವಾಲು ನೀಡುತ್ತಿದ್ದಾರೆ. ನನ್ನ ನೆಚ್ಚಿನ ಆಟಗಾರ ಸ್ಯಾಮ್ಸನ್ ಖಂಡಿತ ರಿಷಬ್ ಗೆ ಸವಾಲಾಗಲಿದ್ದಾರೆ ಎಂದು ಹೇಳಿದ್ದಾರೆ.

ಎಂಎಸ್ ಧೋನಿಗೆ ಪರ್ಯಾಯವಾಗಿ ಬೆಳೆಸುವ ಸಲುವಾಗಿ ಆಯ್ಕೆ ಸಮಿತಿ ರಿಷಬ್ ಪಂತ್ ಗೆ ಮೊದಲ ಅವಕಾಶ ನೀಡುತ್ತಿದೆ. ಆದರೆ ಪಂತ್ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಇತ್ತ ಸ್ಯಾಮ್ಸನ್ ಐಪಿಎಲ್ ಹಾಗೂ ಟೀಂ ಇಂಡಿಯಾ ಎ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾದಲ್ಲಿ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದಾರೆ ಎಂದು ಎಚ್ಚರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com