ಧೋನಿಯೊಂದಿಗೆ ಬಿಸಿಸಿಐ ಉತ್ತಮವಾಗಿ ನಡೆದುಕೊಳ್ಳಲಿಲ್ಲ: ಸಕ್ಲೈನ್ ಮುಷ್ತಾಕ್

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಭಾರತ ಕ್ರಿಕೆಟ್ ನಿಯಂತ್ರಣಾ ಮಂಡಳಿ(ಬಿಸಿಸಿಐ) ಉತ್ತಮವಾಗಿ ನಡೆಸಿಕೊಂಡಿಲ್ಲ ಎಂದು ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಕ್ಲೈನ್ ​​ಮುಷ್ತಾಕ್ ಹೇಳಿದ್ದಾರೆ.
ಎಂಎಸ್ ಧೋನಿ-ಮುಷ್ತಾಕ್
ಎಂಎಸ್ ಧೋನಿ-ಮುಷ್ತಾಕ್

ಇಸ್ಲಾಮಾಬಾದ್: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಭಾರತ ಕ್ರಿಕೆಟ್ ನಿಯಂತ್ರಣಾ ಮಂಡಳಿ(ಬಿಸಿಸಿಐ) ಉತ್ತಮವಾಗಿ ನಡೆಸಿಕೊಂಡಿಲ್ಲ ಎಂದು ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಕ್ಲೈನ್ ​​ಮುಷ್ತಾಕ್ ಹೇಳಿದ್ದಾರೆ.

ಧೋನಿ ವಿದಾಯ ಪಂದ್ಯವಿಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು, ಆದರೆ ಧೋನಿ ಅವರು ಭಾರತ ಜೆರ್ಸಿಯಲ್ಲಿ ಕೊನೆಯ ಬಾರಿಗೆ ಆಡುವುದನ್ನು ನೋಡಬೇಕೆಂದು ಅವರ ಅಭಿಮಾನಿಗಳೆಲ್ಲರೂ ಬಯಸಿದ್ದರು ಎಂದು ಮುಷ್ತಾಕ್ ಹೇಳಿದ್ದಾರೆ.

ಧೋನಿಯಂತ ದಿಗ್ಗಜ ಆಟಗಾರರನ್ನು ಸರಿಯಾದ ಮಾರ್ಗದಲ್ಲಿ ಕಳುಹಿಸಿಕೊಡುವಲ್ಲಿ ವಿಫಲವಾಗಿದೆ. ಧೋನಿ ನಿವೃತ್ತಿ ಈ ರೀತಿ ಆಗಬಾರದಿತ್ತು. ಇದು ನನ್ನ ಮನಸ್ಸಿನ ಮಾತು. ಬಿಸಿಸಿಐ ಧೋನಿಯನ್ನು ಈ ರೀತಿ ನಡೆಸಿಕೊಂಡಿರುವುದಕ್ಕೆ ಬಹಳ ನೋವಾಗಿದೆ ಎಂದು ಮುಷ್ತಾಕ್ ತಮ್ಮ ಯೂಟ್ಯೂಬ್ ಚಾನಲ್ ನಲ್ಲಿ ಹೇಳಿದ್ದಾರೆ. 

ಎಂಎಸ್ ಧೋನಿ ಅವರು ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com