ನಾನು ಔಟ್ ಆಗದೇ ಉಳಿದಿದ್ದರೇ ಫಲಿತಾಂಶ ಬೇರೆದಾಗಿರುತಿತ್ತು: ನವದೀಪ್ ಸೈನಿ

“ನಾನು ಔಟ್ ಆಗದೇ ಉಳಿದಿದ್ದರೇ ಪಂದ್ಯದ ಫಲಿತಾಂಶವು ವಿಭಿನ್ನವಾಗಿರುತಿತ್ತು” ಎಂದು ನವದೀಪ್ ಸೈನಿ ಹೇಳಿದ್ದಾರೆ.
ನವದೀಪ್ ಸೈನಿ
ನವದೀಪ್ ಸೈನಿ

ಆಕ್ಲೆಂಡ್: “ನಾನು ಔಟ್ ಆಗದೇ ಉಳಿದಿದ್ದರೇ ಪಂದ್ಯದ ಫಲಿತಾಂಶವು ವಿಭಿನ್ನವಾಗಿರುತಿತ್ತು” ಎಂದು ನವದೀಪ್ ಸೈನಿ ಹೇಳಿದ್ದಾರೆ.

ಸೈನಿ ಹಾಗೂ ರವೀಂದ್ರ ಜಡೇಜಾ ತಂಡಕ್ಕೆ ಸಮಯೋಚಿತ ಬ್ಯಾಟಿಂಗ್ ನೀಡಿ ತಂಡಕ್ಕೆ ಆಧಾರವಾದರು. ಸೈನಿ 45 ರನ್ ಬಾರಿಸಿ ಔಟ್ ಆದರು.

"ನಾನು ಔಟ್ ಆಗಿ ಪೆವಿಲಿಯನ್‌ಗೆ ಹೋದಾಗ ಮತ್ತು ಅಲ್ಲಿ ವೀಡಿಯೊದಲ್ಲಿ ನಾನು ನೋಡಿದಾಗ, ನಾನು ಔಟ್ ಆಗಿದಕ್ಕೆ ಬೇಸರವಾಯಿತು. ನಾನು ಔಟ್ ಆಗದೇ ಇದಿದ್ದರೆ, ಫಲಿತಾಂಶವು ಬೇರೆ ಆಗುತ್ತಿತ್ತು. ನಾವು ಗೆಲುವಿಗೆ ಬಹಳ ಹತ್ತಿರದಲ್ಲಿದ್ದೆವು. ಮೆಲ್ಪಂಕ್ತಿಯ ಆಟಗಾರರು ಬೇಗನೆ ಪೆವಿಯನ್ ಸೇರಿದರು. ಮಧ್ಯಮ ಕ್ರಮಾಂಕವು ಕೆಲವು ಕೆಟ್ಟ ಹೊಡೆತಗಳನ್ನು ಪ್ರಯೋಗಿಸಿದರು ಎಂದಿದ್ದಾರೆ.

ನ್ಯೂಜಿಲ್ಯಾಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 22 ರನ್ ಗಳಿಂದ ಸೋಲು ಕಂಡಿದ್ದು ಸರಣಿ ಕೈಚೆಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com