ಕರಾಚಿ: ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ಟಿ20 ವಿಶ್ವ ಕಪ್ ನಡೆಯುವುದನ್ನು ಕಲ್ಪಿಸಿಕೊಳ್ಳವುದಕ್ಕೂ ಸಿದ್ದರಿಲ್ಲ ಎಂದು ಪಾಕ್ ಮಾಜಿ ಕ್ರಿಕೆಟಿಗ ವಾಸಿಮ್ ಅಕ್ರಂ ಹೇಳಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ಮಹಾಮಾರಿ ನಿಯಂತ್ರಣಕ್ಕೆ ಬಂದ ಬಳಿಕ ಯಾವುದರೊಂದು ಸೂಕ್ತ ಸಮಯದಲ್ಲಿ ವಿಶ್ವ ಕಪ್ ಆಯೋಜಿಸಬಹುದು. ಅಲ್ಲಿಯ ತನಕ ಐಸಿಸಿ ಕಾಯಲೇ ಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಬಾಗಿಲು ಮುಚ್ಚಿದ ಕ್ರೀಡಾಂಗಣದಲ್ಲಿ ವಿಶ್ವ ಕಪ್ ಆಯೋಜನೆ ಉತ್ತಮ ಯೋಜನೆ ಎಂದು ನನಗನ್ನಿಸುತ್ತಿಲ್ಲ. ಪ್ರೇಕ್ಷಕರಿಲ್ಲದೆ ವಿಶ್ವ ಕಪ್ ಆಯೋಜಿಸುವುದಾದರೂ ಹೇಗೆ. ಎಂದು ಅಕ್ರಮ್ ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಶ್ನಿಸಿದ್ದಾರೆ.
Advertisement