ರಾಜ್ ಕೋಟ್: ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಸೌರಾಷ್ಟ್ರ 86ನೇ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ನಲ್ಲಿ ಬಂಗಾಳ ತಂಡದ ವಿರುದ್ಧ ಇನ್ನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಚಾಂಪಿಯನ್ ಪಟ್ಟವನ್ನು ಚೊಚ್ಚಲ ಬಾರಿಗೆ ಅಲಂಕರಿಸಿದೆ.
ಸೌರಾಷ್ಟ್ರ ಮೊದಲ ಇನ್ನಿಂಗ್ಸ್ ನಲ್ಲಿ 425 ರನ್ ಗಳಿಗೆ ಆಲೌಟ್. ಬಂಗಾಳ ಮೊದಲ ಇನ್ನಿಂಗ್ಸ್ ನಲ್ಲಿ 381 ರನ್ ಗೆ ಸರ್ವಪತನ ಹೊಂದಿತು. ಸೌರಾಷ್ಟ್ರ 4 ವಿಕೆಟ್ ಗೆ 105 ರನ್ ಗಳಿಸಿ ಮುನ್ನುಗುತ್ತಿದ್ದಾಗ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.
ಜಯದೇವ್ ಉನಾದ್ಕತ್ ನೇತೃತ್ವದ ಸೌರಾಷ್ಟ್ರ ತಂಡ ಇದೇ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ನಿಯಮಗಳ ಪ್ರಕಾರ, ರಣಜಿ ಟ್ರೋಫಿಯ ಫೈನಲ್ ಪಂದ್ಯವು ಡ್ರಾ ಕಡೆಗೆ ಸಾಗಿದರೆ, ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ವಿಜೇತರನ್ನು ನಿರ್ಧರಿಸಲಾಗುತ್ತದೆ. ಮೊದಲ ಇನ್ನಿಂಗ್ಸ್ನಲ್ಲಿ ಯಾರು ಮುನ್ನಡೆ ಸಾಧಿಸುತ್ತಾರೋ ಅವರನ್ನು ಚಾಂಪಿಯನ್ ಎಂದು ಘೋಷಿಸಲಾಗುತ್ತದೆ.
ಸೌರಾಷ್ಟ್ರ ಶುಕ್ರವಾರ ಬಂಗಾಳವನ್ನು 381 ರನ್ನುಗಳಿಗೆ ಕಟ್ಟಿ ಹಾಕಿ 44 ರನ್ಗಳ ಮುನ್ನಡೆ ಸಾಧಿಸಿತು.ಐದನೇ ದಿನವನ್ನು 354/6 ಕ್ಕೆ ಪುನರಾರಂಭಿಸಿ, ಬಂಗಾಳ ತನ್ನ ಅಂತಿಮ ನಾಲ್ಕು ವಿಕೆಟ್ಗಳನ್ನು ಕೇವಲ 27 ರನ್ಗಳಿಗೆ ಕಳೆದುಕೊಂಡಿತು ಮತ್ತು 381 ರನ್ಗಳಿಗೆ ಆಲೌಟ್ ಆಯಿತು.
Advertisement