ನಾಯಕ ವಿರಾಟ್ ಬೆನ್ನಿಗೆ ನಿಂತ ಮದನ್ ಲಾಲ್

ಭಾರತ ತಂಡದ ಮಾಜಿ ಆಲ್ ರೌಂಡರ್ ಮತ್ತು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕ್ರಿಕೆಟ್ ಸಲಹಾ ಸಮಿತಿಯ ಮುಖ್ಯಸ್ಥರಾದ ಮದಲ್ ಲಾಲ್ ಅವರು ನಾಯಕ ವಿರಾಟ್ ಕೊಹ್ಲಿಯವರ ಆಕ್ರಮಣಕಾರಿ ನಡವಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ
ವಿರಾಟ್ ಕೊಹ್ಲಿ, ಮದನ್ ಲಾಲ್
ವಿರಾಟ್ ಕೊಹ್ಲಿ, ಮದನ್ ಲಾಲ್

ನವದೆಹಲಿ: ಭಾರತ ತಂಡದ ಮಾಜಿ ಆಲ್ ರೌಂಡರ್ ಮತ್ತು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕ್ರಿಕೆಟ್ ಸಲಹಾ ಸಮಿತಿಯ ಮುಖ್ಯಸ್ಥರಾದ ಮದಲ್ ಲಾಲ್ ಅವರು ನಾಯಕ ವಿರಾಟ್ ಕೊಹ್ಲಿಯವರ ಆಕ್ರಮಣಕಾರಿ ನಡವಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ

ಇತ್ತೀಚೆಗೆ ಮುಕ್ತಾಯಗೊಂಡ ನ್ಯೂಜಿಲೆಂಡ್ ಪ್ರವಾಸದ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ ವೇಳೆ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅವರ ವಿಕೆಟ್ ಪಡೆದ ಬಳಿಕ ಸಂಭ್ರಮಿಸಿ ವಿರಾಟ್ ನಿಂದನೆಗೆ ಒಳಗಾಗಿದ್ದರು. ಈ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಅದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ

ಭಾರತದಲ್ಲಿ ಜನರು ವಿರಾಟ್ ರನ್ನು ಶಾಂತವಾಗಿರಲು ಏಕೆ ಬಯಸುತ್ತಿದ್ದಾರೆ ಎಂಬುದು ತಿಳಿದಿಲ್ಲ ಮೊದಲು, ಆಕ್ರಮಣಕಾರಿ ನಾಯಕನನ್ನು ಜನರು ಬಯಸಿದ್ದರು. ಮತ್ತು ಈಗ ವಿರಾಟ್ ಅವರ ಕೋಪವನ್ನು ನಿಯಂತ್ರಿಸಬೇಕೆಂದು ಬಯಸುತ್ತಾರೆ. ಅವರು ಮೈದಾನದಲ್ಲಿನ ನಡುವಳಿಕೆ ನನಗೆ ಇಷ್ಟ. ವಿರಾಟ್ ಅವರ ನಡವಳಿಕೆಯನ್ನು ನಾನು ಆನಂದಿಸುತ್ತೇನೆ ಮತ್ತು ಅವನಂತಹ ನಾಯಕನ ಅವಶ್ಯಕತೆ ನಮಗಿದೆ ಎಂದು ಮದನ್ ತಿಳಿಸಿದ್ದಾರೆ

ಭಾರತ ಮೂರು ಪಂದ್ಯಗಳ ಏಕದಿನ ಸರಣಿಯನ್ನು ನ್ಯೂಜಿಲೆಂಡ್ ವಿರುದ್ಧ 0-3ರಲ್ಲಿ ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 0-2ರಲ್ಲಿ ಸೋಲು ಕಂಡಿತ್ತು. ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ, ವಿರಾಟ್ ಪತ್ರಕರ್ತನೊಬ್ಬನ ಪ್ರಶ್ನೆಗೆ ಉತ್ತರಿಸುವ ವೇಳೆ ಕೋಪಗೊಂಡರು, ಅಲ್ಲದೆ ವಿವಾದವನ್ನು ಹುಟ್ಟುಹಾಕದಂತೆ ಕೇಳಿದ್ದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com