ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಒಂದೂವರೆ ದಶಕದ ಕ್ರಿಕೆಟ್ ಬದುಕಿನಲ್ಲಿ ತಾಳ್ಮೆ ಕಳೆದುಕೊಂಡಿರುವುದು ತೀರಾ ಕಡಿಮೆ. ಹೀಗಾಗಿ ಕ್ಯಾಪ್ಟನ್ ಕೂಲ್ ಎಂದೇ ಎಲ್ಲರಿಂದ ಕರೆಸಿಕೊಂಡಿದ್ದಾರೆ.
ಆದರೆ, ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಗೌತಮ್ ಗಂಭೀರ್ ಮತ್ತು ಇರ್ಫಾನ್ ಪಠಾಣ್, ಕ್ಯಾಪ್ಟನ್ ಧೋನಿ ಆನ್ಫೀಲ್ಡ್ನಲ್ಲಿ ತಾಳ್ಮೆ ಕಳೆದುಕೊಂಡ ಹಲವು ಸನ್ನಿವೇಶಗಳಿವೆ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಭಾರತ ತಂಡದ ಯುವ ಸ್ಪಿನ್ನರ್ ಕುಲ್ದೀಪ್ ಯಾದವ್ ಸಹ, ಕಳೆದ 20 ವರ್ಷಗಳಲ್ಲಿ ಮೊದಲ ಬಾರಿ ಧೋನಿ ಕೋಪಗೊಂಡದ್ದನ್ನು ಕಂಡು ತಮಗೆ ಭಯವಾಗಿತ್ತು ಎಂದಿದ್ದರು.
Advertisement