ಅಫ್ರಿದಿ ವಿಚಾರದಲ್ಲಿ ಭಜ್ಜಿಗೆ ಕೊನೆಗೂ ಜ್ಞಾನರ್ಜನೆ!

ಕಾಶ್ಮೀರ ವಿಚಾರದಲ್ಲಿ ಶಾಹಿದ್‌ ಅಫ್ರಿದಿ ನೀಡಿರುವ ಇತ್ತೀಚಿನ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಭಾರತ ತಂಡದ ಅವಕಾಶವಂಚಿತ ಆಫ್‌ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌, ಪಾಕಿಸ್ತಾನದ ಮಾಜಿ ಕ್ರಿಕೆಟಿಗನ ಜೊತೆಗೆ ಇನ್ನುಂದೆ ಯಾವುದೇ ಒಪ್ಪಂದಗಳಾಗಲಿ ಅಥವಾ ಬಾಂಧವ್ಯವಾಗಲಿ ಇರುವುದಿಲ್ಲ ಎಂದಿದ್ದಾರೆ.
ಅಫ್ರಿದಿ, ಹರ್ಭಜನ್ ಸಿಂಗ್
ಅಫ್ರಿದಿ, ಹರ್ಭಜನ್ ಸಿಂಗ್

ನವದೆಹಲಿ: ಕಾಶ್ಮೀರ ವಿಚಾರದಲ್ಲಿ ಶಾಹಿದ್‌ ಅಫ್ರಿದಿ ನೀಡಿರುವ ಇತ್ತೀಚಿನ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಭಾರತ ತಂಡದ ಅವಕಾಶವಂಚಿತ ಆಫ್‌ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌, ಪಾಕಿಸ್ತಾನದ ಮಾಜಿ ಕ್ರಿಕೆಟಿಗನ ಜೊತೆಗೆ ಇನ್ನುಂದೆ ಯಾವುದೇ ಒಪ್ಪಂದಗಳಾಗಲಿ ಅಥವಾ ಬಾಂಧವ್ಯವಾಗಲಿ ಇರುವುದಿಲ್ಲ ಎಂದಿದ್ದಾರೆ.

"ಶಾಹಿದ್‌ ಅಫ್ರಿದಿ ಅವರ ಈ ನಡೆ ಬಹಳ ಬೇಸರ ತಂದಿದೆ. ನಮ್ಮ ದೇಶ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಗ್ಗೆ ತುಚ್ಚವಾಗಿ ಮಾತನಾಡುವುದನ್ನು ನಾನು ಸಹಿಸುವುದಿಲ್ಲ. ಇದನ್ನು ಸ್ವೀಕರಿಸಲು ಖಂಡಿತಾ ಸಾಧ್ಯವಿಲ್ಲ," ಎಂದು ಇಂಡಿಯಾ ಟುಡೇ ಸ್ಫೋರ್ಟ್ಸ್‌ ಟಾಕ್‌ ಶೋದಲ್ಲಿ ಹರ್ಭಜನ್‌ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com