ಮುಂಬೈ: ಮಾನಸಿಕ ಶಕ್ತಿ ಮತ್ತು ವಾಸ್ಥವಿಕವಾಗಿ ಯೋಚಿಸಿವುದರಿಂದ ಯಶಸ್ಸು ಕಾಣಬಹುದು ಎಂದು ಎಂದು ಭಾರತೀಯ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.
ಕಾರ್ತಿಕ್ ಕಾರ್ಯಕ್ರಮವೊಂದರಲ್ಲಿ, ಮಾನಸಿಕ ಶಕ್ತಿಗಾಗಿ, ವರ್ತಮಾನದಲ್ಲಿ ಉಳಿಯುವ ಸಾಮರ್ಥ್ಯ ಬಹಳ ಮುಖ್ಯ. ನೀವು ಕಠಿಣ ಪರಿಸ್ಥಿತಿಯಲ್ಲಿದ್ದಾಗ, ಬಹಳಷ್ಟು ಆಲೋಚನೆಗಳು ಮನಸ್ಸಿಗೆ ಬರುತ್ತವೆ, ಆದರೆ ಆ ಸಮಯದಲ್ಲಿ ನೀವು ಏನು ಮಾಡಬೇಕೆಂಬುದನ್ನು ಮನಗೊಂಡರೆ, ನೀವು ಹೆಚ್ಚಿನ ಯಶಸ್ಸನ್ನು ಸಾಧಿಸುವಿರಿ ಎಂದಿದ್ದಾರೆ.
Advertisement