ಐಪಿಎಲ್ ನಿಂದ ಹೊರಗುಳಿಯಲು ಸಿಎಸ್ ಕೆಯ ಸ್ಪಿನ್ನರ್ ಹರ್ಭಜನ್ ಸಿಂಗ್ ನಿರ್ಧರಿಸಿದ್ದಾರೆ.
ಯುಎಇಯಲ್ಲಿ ನಡೆಯುತ್ತಿರುವ ಈ ಬಾರಿಯ ಐಪಿಎಲ್ ನಲ್ಲಿ ಭಾಗವಹಿಸದೇ ಇರುವುದಕ್ಕೆ ಭಜ್ಜಿ ಕಾರಣ ತಿಳಿಸಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ತಾವು ಐಪಿಎಲ್ ನಿಂದ ದೂರ ಉಳಿಯುತ್ತಿರುವುದಾಗಿ ಹರ್ಭಜನ್ ಸಿಂಗ್ ಹೇಳಿದ್ದಾರೆ.
ಸಿಎಸ್ ಕೆ ಮ್ಯಾನೇಜ್ಮೆಂಟ್ ಗೂ ಸಹ ಹರ್ಭಜನ್ ಸಿಂಗ್ ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ. ಸೆ.19 ರಿಂದ ಐಪಿಎಲ್ ಪ್ರಾರಂಭವಾಗಲಿದೆ.
ಈಗಾಗಲೇ ಸಿಎಸ್ ಕೆಯಿಂದ ರೈನಾ ಹೊರಗುಳಿದಿದ್ದರು. ದುಬೈ ನಲ್ಲಿ ಮೂರನೇ ಹಂತದ ಟೆಸ್ಟಿಂಗ್ ನಂತರ ಸಿಎಸ್ ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಉಳಿದ ಎಲ್ಲಾ ಆಟಗಾರರು ತರಬೇತಿಯಲ್ಲಿ ಭಾಗಿಯಾಗಲಿದ್ದಾರೆ. ಸಿಎಸ್ ಕೆ ತಂಡಕ್ಕೆ ಸಂಬಂಧಪಟ್ಟ 13 ಸದಸ್ಯರಲ್ಲಿ ಕೊರೋನಾ ಸೋಂಕು ದೃಢಪಟ್ಟಿತ್ತು.
Advertisement