ಮೂರನೇ ಟೆಸ್ಟ್: ಮೊಹಮ್ಮದ್ ಸಿರಾಜ್ ವಿರುದ್ಧ ಇಂಗ್ಲೆಂಡ್ ಅಭಿಮಾನಿಗಳ ಅತಿರೇಕದ ವರ್ತನೆ; ರಿಷಭ್ ಪಂತ್ ಗರಂ

ಇಂಗ್ಲೆಂಡ್ ಅಭಿಮಾನಿಗಳ ಅತಿರೇಕದ ವರ್ತನೆ ವಿರುದ್ಧ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ ಗರಂ ಆಗಿದ್ದಾರೆ. ಕಾರಣ ಬುಧವಾರ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯದ ವೇಳೆ ಪೀಲ್ಡಿಂಗ್ ನಲ್ಲಿದ್ದ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಮೇಲೆ ಇಂಗ್ಲೆಂಡ್ ಅಭಿಮಾನಿಗಳು ಬಾಲ್ ಎಸೆದಿದ್ದಾರೆ.
ಸಿರಾಜ್, ರಿಷಭ್ ಪಂತ್
ಸಿರಾಜ್, ರಿಷಭ್ ಪಂತ್

ಹೆಡಿಂಗ್ಲಿ: ಇಂಗ್ಲೆಂಡ್ ಅಭಿಮಾನಿಗಳ ಅತಿರೇಕದ ವರ್ತನೆ ವಿರುದ್ಧ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ ಗರಂ ಆಗಿದ್ದಾರೆ. ಕಾರಣ ಬುಧವಾರ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯದ ವೇಳೆ ಪೀಲ್ಡಿಂಗ್ ನಲ್ಲಿದ್ದ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಮೇಲೆ ಇಂಗ್ಲೆಂಡ್ ಅಭಿಮಾನಿಗಳು ಬಾಲ್ ಎಸೆದಿದ್ದಾರೆ.

ಈ ಅತಿರೇಕದ ವರ್ತನೆಯಿಂದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಸಮಾಧಾನಗೊಂಡಿದ್ದಾಗಿ ರಿಷಭ್ ಪಂತ್ ಪಂದ್ಯ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಏನಾದರೂ ಕೂಗಿ, ಏನಾದರೂ ಹೇಳಿ ಆದರೆ, ಪೀಲ್ಡಿಂಗ್ ನಲ್ಲಿರುವವರ ಮೇಲೆ ವಸ್ತುಗಳನ್ನು ಎಸೆಯಬೇಡಿ, ಇದು ಕ್ರಿಕೆಟ್ ಗೆ ಒಳ್ಳೆಯದಲ್ಲಾ ಎಂದು ರಿಷಭ್ ಪಂತ್ ಹೇಳಿದರು.

ಈ ತಿಂಗಳ ಆರಂಭದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ವೇಳೆಯಲ್ಲೂ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಮೇಲೆ ಕೆಲ ಅಭಿಮಾನಿಗಳು ಷಾಂಪೇನ್ ಕಾರ್ಕ್ಸ್ ಎಸೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com