ದೇಶಾದ್ಯಂತ 2000 ಆಕ್ಸಿಜನ್ ಕಾನ್ಸಂಟ್ರೇಟರ್ ಗಳ ವಿತರಣೆಗೆ ಬಿಸಿಸಿಐ ಮುಂದು

ಕೋವಿಡ್ -19 ಸಾಂಕ್ರಾಮಿಕ ರೋಗ ನಿಯಂತ್ರಣದಲ್ಲಿ ಭಾರತದ ಪ್ರಯತ್ನ ಇನ್ನಷ್ಟು ಹೆಚ್ಚಿಸುವಂತೆ ಮಾಡಲು 10 ಲೀಟರ್ ಸಾಮರ್ಥ್ಯದ 2000 ಆಮ್ಲಜನಕ ಕಾನ್ಸಂಟ್ರೇಟರ್ ಗಳನ್ನು ನೀಡುವುದಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ ಪ್ರಕಟಿಸಿದೆ.
ಬಿಸಿಸಿಐ
ಬಿಸಿಸಿಐ

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗ ನಿಯಂತ್ರಣದಲ್ಲಿ ಭಾರತದ ಪ್ರಯತ್ನ ಇನ್ನಷ್ಟು ಹೆಚ್ಚಿಸುವಂತೆ ಮಾಡಲು 10 ಲೀಟರ್ ಸಾಮರ್ಥ್ಯದ 2000 ಆಮ್ಲಜನಕ ಕಾನ್ಸಂಟ್ರೇಟರ್ ಗಳನ್ನು ನೀಡುವುದಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ ಪ್ರಕಟಿಸಿದೆ.

ಕೊರೋನಾವೈರಸ್ ಎರಡನೇ ಅಲೆಯಿಂದ ದೇಶ ಅಪಾರ ಹಾನಿ ಅನುಭವಿಸಿದ ನಂತರ ವೈದ್ಯಕೀಯ ಉಪಕರಣಗಳು ಮತ್ತು ಜೀವ ಉಳಿಸುವ ಆಮ್ಲಜನಕದ ಬೇಡಿಕೆ ಅತ್ಯಂತ ಹೆಚ್ಚಾಗಿದೆ.

ಮುಂದಿನ ಕೆಲವು ತಿಂಗಳುಗಳಲ್ಲಿ, ಅಗತ್ಯವಿರುವ ರೋಗಿಗಳಿಗೆ ನಿರ್ಣಾಯಕ ವೈದ್ಯಕೀಯ ನೆರವು ಮತ್ತು ಆರೈಕೆಯನ್ನು ನೀಡಲಾಗುವುದು ಮತ್ತು ಈ ಉಪಕ್ರಮವು ಸಾಂಕ್ರಾಮಿಕ ರೋಗದಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡುತ್ತದೆ ಎಂಬ ಭರವಸೆಯೊಂದಿಗೆ ಮಂಡಳಿಯು ಭಾರತದಾದ್ಯಂತ ಕಾನ್ಸಂಟ್ರೇಟರ್ ಗಳನ್ನು ವಿತರಿಸುತ್ತದೆ.

"ವೈರಸ್ ವಿರುದ್ಧದ ಈ ಸುದೀರ್ಘ ಯುದ್ಧದಲ್ಲಿ ನಾವು ಹೋರಾಡುತ್ತಿರುವಾಗ ವೈದ್ಯಕೀಯ ಮತ್ತು ಆರೋಗ್ಯ ಕ್ಷೇತ್ರವು ವಹಿಸಿರುವ ಪಾತ್ರವನ್ನು ಬಿಸಿಸಿಐ ಒಪ್ಪಿಕೊಂಡಿದೆ ಮತ್ತು ಆ ನಿಟ್ಟಿನಲ್ಲಿ ನಮ್ಮ ಸೇವೆಯನ್ನು ಮುಂದುವರಿಸಿದೆ" ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದರು.

"ಅವರು ನಿಜವಾಗಿಯೂ ಮುಂಚೂಣಿ ಯೋಧರು ಮತ್ತು ನಮ್ಮನ್ನು ರಕ್ಷಿಸಲು ಸಾಧ್ಯವಾದಷ್ಟು ಮಾಡಿದ್ದಾರೆ. ಮಂಡಳಿಯು ಯಾವಾಗಲೂ ಆರೋಗ್ಯ ಮತ್ತು ಸುರಕ್ಷತೆಯನ್ನು ಅಗ್ರಸ್ಥಾನದಲ್ಲಿರಿಸಿದೆ ಮತ್ತು ಅದಕ್ಕೆ  ಬದ್ಧವಾಗಿದೆ. ಆಮ್ಲಜನಕ ಕಾನ್ಸಂಟ್ರೇಟರ್ ಗಳು ಪೀಡಿತರಿಗೆ ತಕ್ಷಣದ ಪರಿಹಾರವನ್ನು ನೀಡುತ್ತದೆ ಮತ್ತು ಅವರ ತ್ವರಿತ ಚೇತರಿಕೆಗೆ ಸಹಾಯ ಮಾಡುತ್ತದೆ" ಎಂದು ಗಂಗೂಲಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com