ರವಿಶಾಸ್ತ್ರಿ ನಂತರ ಭಾರತದ ಇಬ್ಬರು ಕೋಚ್‌ಗಳಿಗೆ ಕೊರೋನಾ ದೃಢ; ಪ್ರಕರಣ ಹೆಚ್ಚಾದರೆ 5ನೇ ಟೆಸ್ಟ್ ಅನುಮಾನ!

ಟೀಂ ಇಂಡಿಯಾದ ಮುಖ್ಯ ಕೋಚ್ ರವಿಶಾಸ್ತ್ರಿಗೆ ಕೊರೋನಾ ದೃಢಪಟ್ಟ ಬೆನ್ನಲ್ಲೇ ಭಾರತದ ಬೌಲಿಂಗ್ ತರಬೇತುದಾರ ಭರತ್ ಅರುಣ್ ಮತ್ತು ಫೀಲ್ಡಿಂಗ್ ತರಬೇತುದಾರ ಆರ್. ಶ್ರೀಧರ್ ಗೆ ಕೊರೋನಾ ವಕ್ಕರಿಸಿದೆ.
ಭರತ್ ಅರುಣ್-ರವಿಶಾಸ್ತ್ರಿ
ಭರತ್ ಅರುಣ್-ರವಿಶಾಸ್ತ್ರಿ

ಚೆನ್ನೈ: ಟೀಂ ಇಂಡಿಯಾದ ಮುಖ್ಯ ಕೋಚ್ ರವಿಶಾಸ್ತ್ರಿಗೆ ಕೊರೋನಾ ದೃಢಪಟ್ಟ ಬೆನ್ನಲ್ಲೇ ಭಾರತದ ಬೌಲಿಂಗ್ ತರಬೇತುದಾರ ಭರತ್ ಅರುಣ್ ಮತ್ತು ಫೀಲ್ಡಿಂಗ್ ತರಬೇತುದಾರ ಆರ್. ಶ್ರೀಧರ್ ಗೆ ಕೊರೋನಾ ವಕ್ಕರಿಸಿದೆ. ಇನ್ನು ಮುಂದಿನ ದಿನಗಳಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾದರೆ 5ನೇ ಟೆಸ್ಟ್ ಪಂದ್ಯ ನಡೆಯುವುದು ಅನುಮಾನವಾಗಿದೆ.

ನಾಲ್ಕನೇ ಟೆಸ್ಟ್‌ನ 5ನೇ ದಿನವು ವೇಳಾಪಟ್ಟಿಯಂತೆ ಆರಂಭವಾಯಿತು. ಎಲ್ಲಾ ಆಟಗಾರರಿಗೆ ಕೊರೋನಾ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ ಋಣಾತ್ಮಕ ವರದಿ ಬಂದಿದ್ದರಿಂದ ಆಟವನ್ನು ಮುಂದುವರೆಸಲಾಗಿತ್ತು. ಬಿಸಿಸಿಐ ವೈದ್ಯಕೀಯ ತಂಡವು ಒಂದು ನಿಕಟವಾದ ಟ್ಯಾಬ್ ಅನ್ನು ಇಟ್ಟುಕೊಂಡಿದೆ.

ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಸೇರಿದಂತೆ ಇಡೀ ಭಾರತೀಯ ತಂಡವು ಸಂಪೂರ್ಣವಾಗಿ ಲಸಿಕೆಯನ್ನು ಪಡೆದಿದ್ದರೂ ಬಿಸಿಸಿಐನಲ್ಲಿ ಆತಂಕವಿದೆ. ಇದುವರೆಗೂ ಯಾವುದೇ ಆಟಗಾರರು ಯಾವುದೇ ರೋಗಲಕ್ಷಣಗಳನ್ನು ಕಾಣಿಸಿಲ್ಲ. ಆದರೆ ಬಿಸಿಸಿಐ ತನ್ನ ಬೆರಳುಗಳನ್ನು ಲೆಕ್ಕ ಹಾಕುತ್ತಿದ್ದು ಮುಂದಿನ 24-48 ಗಂಟೆಗಳು ನಿರ್ಣಾಯಕ ಎಂದು ನಂಬಿದೆ. 

ಐದನೇ ಟೆಸ್ಟ್ ಪಂದ್ಯಕ್ಕಾಗಿ ಭಾರತವು ಮಂಗಳವಾರ ಮ್ಯಾಂಚೆಸ್ಟರ್‌ಗೆ ತೆರಳಲಿದೆ. ಆದರೆ ಅರುಣ್ ಮತ್ತು ಶ್ರೀಧರ್ ಅವರಿಗೆ ಪಾಸಿಟಿವ್ ಬಂದಿರುವುದರಿಂದ ಅವರ ನಿಕಟ ಸಂಪರ್ಕಗಳು ಯಾರೆಂಬುದು ಸ್ಪಷ್ಟವಾಗಿಲ್ಲ. ಸ್ಥಳೀಯ ಆರೋಗ್ಯ ಮಾರ್ಗಸೂಚಿಗಳ ಪ್ರಕಾರ, ಅವರ ನಿಕಟ ಸಂಪರ್ಕವು ಕಡ್ಡಾಯವಾಗಿ 10 ದಿನಗಳ ಕಾಲ ಕ್ವಾರಂಟೈನ್ ನಲ್ಲಿರಬೇಕಾಗುತ್ತದೆ. 

ಭಾರತೀಯ ಕ್ರಿಕೆಟ್ ಆಟಗಾರರಿಗೆ ಕೊರೋನಾ ವಕ್ಕರಿಸಿದರೆ ಸೆಪ್ಟೆಂಬರ್ 19ರಂದು ಯುಎಇಯಲ್ಲಿ ಪುನರಾರಂಭಗೊಳ್ಳುವ ಐಪಿಎಲ್ ದ್ವಿತೀಯಾರ್ಧಕ್ಕೆ ಕಂಟಕ ಎದುರಾಗಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com